ಸಂಘದ ಅಧ್ಯಕ್ಷ ಸುರೇಶ ಸಿಂಗನಾಳ ಮಾತನಾಡಿ, ಕೇಂದ್ರ ಸರ್ಕಾರ ಭಾರತೀಯ ನ್ಯಾಯ ಸಂಹಿತೆಯ ಕಲಂ 106ರ ಉಪವಿಧಿ 1 ಮತ್ತು 2ಕ್ಕೆ ತಂದಿರುವ ತಿದ್ದುಪಡಿ ವಾಹನ ಚಾಲಕರು, ಮಾಲೀಕರಿಗೆ ಮಾರಕವಾಗಿ ಪರಿಣಮಿಸಿ, ವೃತ್ತಿಯಿಂದ ಹೊರಗುಳಿಯುವಂತೆ ಮಾಡಿದೆ. ಲಾರಿಗಳು ರಸ್ತೆಗಳಿದರೆ ಸಾಕು ಆರ್ಟಿಒ, ಪೊಲೀಸ್, ಜಿಎಸ್ಟಿ ಅಧಿಕಾರಿಗಳು ಎಲ್ಲೆಂದರಲ್ಲೆ ವಾಹನಗಳನ್ನು ತಡೆದು ಚಾಲಕರಿಗೆ ಕಿರುಕುಳ ನೀಡುತ್ತಿರುವ ಪರಿಣಾಮ ಬೇಸತ್ತು ವಾಹನ ಚಲಾಯಿಸಲು ಚಾಲಕರೇ ಬರುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಅಪಘಾತ ಮಾಡಿ ಪರಾರಿಯಾಗುವ ಪ್ರಕರಣಗಳಿಗೆ ₹ 7 ಲಕ್ಷ ದಂಡ, 10 ವರ್ಷ ಜೈಲು ಶಿಕ್ಷೆ ವಿಧಿಸಿದರೆ, ಚಾಲಕರು ಜೀವನ ಹೇಗೆ ನಡೆಸಬೇಕು ಎಂದು ಪ್ರಶ್ನಿಸಿದರು.