ಬೆಳಿಗ್ಗೆ 10.25 ರಿಂದ 11 ಗಂಟೆಯವರೆಗೆ ಸಲ್ಲುವ ಪುನರ್ವಸು ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ದೇವಸ್ಥಾನದ ಮುಖಮಂಟಪ, ಗೋಪುರ ಕಳಸ, ಧ್ವಜಸ್ಥಂಭ ಪ್ರತಿಷ್ಠಾಪನಾ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದು ಮಂಡಳಿಯ ಅಧ್ಯಕ್ಷ ಎಸ್. ಲಕ್ಷ್ಮೀನಾರಾಯಣ ಹಾಗೂ ಖಜಾಂಚಿ ಲಿಂಗಪ್ಪ ಜನಾದ್ರಿ ತಿಳಿಸಿದ್ದಾರೆ.