<p><strong>ಗಂಗಾವತಿ</strong>: ತಾಲ್ಲೂಕಿನ ಅಂಜನಾದ್ರಿ ಬೆಟ್ಟವನ್ನು ಬಾಗಲಕೋಟೆ ಜಿಲ್ಲೆಯ ಹನುಗುಂದ ತಾಲ್ಲೂಕಿನ ಕೂಡಲಸಂಗಮದ ಬಳಿಯ ಬಿಸಿಲುದಿನ್ನಿ ಗ್ರಾಮದ 19 ವರ್ಷದ ನವೀನ್ ಭರಮಗೌಡ ಮಂಗಳವಾರ 101 ಕೆಜಿ ಭಾರದ ಜೋಳದ ಚೀಲ ಹೊತ್ತು ಏರಿದ್ದಾರೆ. </p>.<p>ಬೆಟ್ಟದ ಆರಂಭದಿಂದ ಹೊತ್ತು ಚೀಲವನ್ನು ಎಲ್ಲಿಯೂ ಇಳಿಸದೆ ರಾಮ, ಹನುಮನನ್ನು ನೆನೆಯುತ್ತಾ ಅವರ ಹೆಸರಿನಲ್ಲಿ ಘೋಷಣೆ ಬೆಟ್ಟ ಏರಿದರು. ಬಳಿಕ ಜೋಳದ ಚೀಲವನ್ನು ದೇವರಿಗೆ ಸಮರ್ಪಿಸಿ ದರ್ಶನ ಪಡೆದರು.</p>.<p>‘ನಾನು ಗ್ರಾಮೀಣ ಪ್ರ ದೇಶದವನಾಗಿದ್ದು ಸಂಗ್ರಾಣಿ ಕಲ್ಲು, ಮುಂಗೈ ಭಾರ ಎತ್ತುವ, ಮೊಣಕಾಲಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆ. ಈಚೆಗೆ ಕೂಡಲಸಂಗಮದಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತನಾದರೇ ಅಂಜನಾದ್ರಿ ಬೆಟ್ಟಕ್ಕೆ ಬರುವುದಾಗಿ ಹರಕೆ ಹೊತ್ತಿದ್ದೆ’ ಎಂದರು.</p>.<p>ನವೀನ್ ಸ್ನೇಹಿತರಾದ ಸಾಗರ, ಮಂಜಪ್ಪ, ವಿಜಯ್, ಸಂಗಪ್ಪ, ವಿಠ್ಠಲ್, ಉಮೇಶ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ತಾಲ್ಲೂಕಿನ ಅಂಜನಾದ್ರಿ ಬೆಟ್ಟವನ್ನು ಬಾಗಲಕೋಟೆ ಜಿಲ್ಲೆಯ ಹನುಗುಂದ ತಾಲ್ಲೂಕಿನ ಕೂಡಲಸಂಗಮದ ಬಳಿಯ ಬಿಸಿಲುದಿನ್ನಿ ಗ್ರಾಮದ 19 ವರ್ಷದ ನವೀನ್ ಭರಮಗೌಡ ಮಂಗಳವಾರ 101 ಕೆಜಿ ಭಾರದ ಜೋಳದ ಚೀಲ ಹೊತ್ತು ಏರಿದ್ದಾರೆ. </p>.<p>ಬೆಟ್ಟದ ಆರಂಭದಿಂದ ಹೊತ್ತು ಚೀಲವನ್ನು ಎಲ್ಲಿಯೂ ಇಳಿಸದೆ ರಾಮ, ಹನುಮನನ್ನು ನೆನೆಯುತ್ತಾ ಅವರ ಹೆಸರಿನಲ್ಲಿ ಘೋಷಣೆ ಬೆಟ್ಟ ಏರಿದರು. ಬಳಿಕ ಜೋಳದ ಚೀಲವನ್ನು ದೇವರಿಗೆ ಸಮರ್ಪಿಸಿ ದರ್ಶನ ಪಡೆದರು.</p>.<p>‘ನಾನು ಗ್ರಾಮೀಣ ಪ್ರ ದೇಶದವನಾಗಿದ್ದು ಸಂಗ್ರಾಣಿ ಕಲ್ಲು, ಮುಂಗೈ ಭಾರ ಎತ್ತುವ, ಮೊಣಕಾಲಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆ. ಈಚೆಗೆ ಕೂಡಲಸಂಗಮದಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತನಾದರೇ ಅಂಜನಾದ್ರಿ ಬೆಟ್ಟಕ್ಕೆ ಬರುವುದಾಗಿ ಹರಕೆ ಹೊತ್ತಿದ್ದೆ’ ಎಂದರು.</p>.<p>ನವೀನ್ ಸ್ನೇಹಿತರಾದ ಸಾಗರ, ಮಂಜಪ್ಪ, ವಿಜಯ್, ಸಂಗಪ್ಪ, ವಿಠ್ಠಲ್, ಉಮೇಶ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>