‘ಶ್ರಾವಣ ಶನಿವಾರ ಬಂಡೆ ಮೇಲೆ ಊಟ ಮಾಡುವುದು. ದೇವಸ್ಥಾನದ ಹತ್ತಿರ ಸಂಗ್ರಹವಾದ ನೀರನ್ನು ಕುಡಿಯುವುದು ಹಲವು ವರ್ಷಗಳಿಂದ ನಡೆದು ಬಂದ ಸಂಪ್ರದಾಯ’ ಎಂದು ತಿಳಿಸುತ್ತಾರೆ ಸಿದ್ದರಾಮಪ್ಪ ಭಟ್ಟ, ಅರ್ಚಕರಾದ ದೇವಪ್ಪ, ವಸಂತ ಕೆರೆಹಳ್ಳಿ, ಹನುಮಪ್ಪ ಉಪ್ಪಾರ, ಕಲ್ಲಪ್ಪ ತಳವಾರ, ಈರಪ್ಪ ಗುರಿಕಾರ, ಸೋಮಪ್ಪ ವಾಲ್ಮೀಕಿ, ರಾಮಚಂದ್ರಪ್ಪ ಗುರಿಕಾರ, ಈರಣ್ಣ ಕೋಮಲಾಪುರ, ನಿಂಗಪ್ಪ ಎಮ್ಮಿ, ನಾಗರಾಜ ಹಳ್ಳಿಗುಡಿ ಹಾಗೂ ಶ್ರೀನಿವಾಸ ಅವರು. ‘ಯಾವುದೇ ಹಿಂಜರಿಕೆ, ಭೇದ–ಭಾವ ಇಲ್ಲದೇ ಸಾಮೂಹಿಕ ಭೋಜನ ಮಾಡುವ ಭಕ್ತರನ್ನು ಒಂದೇ ಕಡೆ ಕಂಡೆವು’ ಎನ್ನುತ್ತಾರೆ ಹುಲಿಗಿಯ ಉಪನ್ಯಾಸಕ ಬಸವರಾಜ ಮೇಟಿ ಹಾಗೂ ಮರಿಸ್ವಾಮಿ ನಾಗಲೀಕರ್ ಅವರು.