ಆನೆಗೊಂದಿ ಪ್ರಾಗೈತಿಹಾಸಿಕ, ಚಾರಿತ್ರಿಕ, ಪೌರಾಣಿಕವಾಗಿ ಸಮೃದ್ಧ ಪರಂಪರೆ ಹೊಂದಿದೆ. ಜತೆಗೆ ವಿಶ್ವ ಪರಂಪರೆ ತಾಣ ಹಂಪಿಯ ಒಂದು ಭಾಗ. ಪೌರಾಣಿಕವಾಗಿ ಪಂಪಾ ಕ್ಷೇತ್ರವೆಂದು, ರಾಮಾಯಣ ಮಹಾಕಾವ್ಯದ ಕಿಷ್ಕಿಂದಾ ರಾಜ್ಯವೆಂದು ಪ್ರಸಿದ್ಧವಾಗಿದೆ. ಇಲ್ಲಿಯೇ ಹನುಮನ ಜನ್ಮವಾಗಿದ್ದು, ಅಂಜನಾದ್ರಿ ಇದೀಗ ದೇಶದ್ಯಾಂತ ಪ್ರಖ್ಯಾತಿ ಪಡೆದಿದೆ. ವಿಜಯನಗರ ಸಾಮ್ರಾಜ್ಯದ ಮಾತೃಸ್ಥಾನ ಸಹ ಆನೆಗೊಂದಿಯೇ ಆಗಿದೆ. ಕ್ಷೇತ್ರದಲ್ಲಿ ಹಿರೇಬೆಣಕಲ್ ಬೆಟ್ಟದ ಸುತ್ತಲು ಸಹ ಅನೇಕ ಪ್ರಾಚೀನ ಕಾಲದ ಮಾನವನ ಅವ ಶೇಷಗಳು, ಸಾವಿರಾರು ವರ್ಷಗಳ ಶಿಲಾಯುಗದ ಗವಿಚಿತ್ರಗಳು ಸಹ ಇವೆ ಎಂದರು.