<p><strong>ಕಾರಟಗಿ</strong>: ಕಾಲುವೆ ಗ್ಯಾಂಗ್ಮನ್ ಸಹಕಾರದೊಂದಿಗೆ ಕಾಲುವೆ ನೀರು ಕಳ್ಳತನವಾಗುತ್ತಿದ್ದು, ಕೆಳಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ನೀರು ಕಳ್ಳತನ ತಡೆಗಟ್ಟಿ, ಕೆಳಭಾಗದ ರೈತರಿಗೆ ನೀರು ಸಿಗುವಂತೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ಪಟ್ಟಣದಲ್ಲಿರುವ ನಂಬರ್ 2 ಕಾಲುವೆ ಕಚೇರಿಗೆ ರೈತರು ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.</p>.<p>ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ರೈತರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸಬೇಕು. ಕೆಳಭಾಗದ ರೈತರ ಜಮೀನುಗಳಿಗೆ ತಕ್ಷಣ ನೀರು ಹರಿಸಬೇಕು ಎಂದು ಒತ್ತಾಯಿಸಿದರು.</p>.<p>32ನೇ ವಿತರಣಾ ಕಾಲುವೆ ವ್ಯಾಪ್ತಿಯ ಕಾರಟಗಿ, ಚನ್ನಳ್ಳಿ ಮತ್ತು ಕೊಂತನೂರು ಗ್ರಾಮದ ರೈತರು ಪ್ರತಿಭಟನೆ ನಡೆಸಿ, ಇಲಾಖೆಯ ಎಂಜಿನಿಯರ್ ಸುಬ್ರಹ್ಮಣ್ಯ ಅವರೊಂದಿಗೆ ಚರ್ಚೆ ನಡೆಸಿ, ಅಕ್ರಮ ನೀರುಗಳ್ಳತನಕ್ಕೆ ಕಡಿವಾಣ ಹಾಕಬೇಕು ಎಂದು ರೈತರು ಆಗ್ರಹಿಸಿದರು.</p>.<p>ನಾಲೆಯಲ್ಲಿ ತುಂಬಿರುವ ಹೂಳು ತಗೆಯಿಸಬೇಕು. ಗಿಡಗಂಟೆ ಸ್ವಚ್ಛಗೊಳಿಸಬೇಕು. ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡಬೇಕು ಎಂದು ರೈತರು ಆಗ್ರಹಿಸಿದರು.</p>.<p>ಎಂಜಿನಿಯರ್ ಸುಬ್ರಹ್ಮಣ್ಯ ಮಾತನಾಡಿ, ನಮ್ಮ ನೇತೃತ್ವದ ತಂಡವು, ಭಾನುವಾರ ನೀರು ಕಳ್ಳತನ ಮಾಡಲು 32/3ರ ಉಪಕಾಲುವೆ ಮೇಲ್ಭಾಗದ ಬೇವಿನಾಳ, ಮೈಲಾಪುರ ಸೀಮೆಯಲ್ಲಿ ಅಕ್ರಮವಾಗಿ ಅಳವಡಿಸಿದ್ದ 14 ಪೈಪ್ಗಳನ್ನು ತೆರವುಗೊಳಿಸಿದೆ. ರೈತರಿಗೆ ನಿಯಮಾನುಸಾರ ಅವರ ಪಾಲಿನ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.</p>.<p>ರೈತರಾದ ಗವಿಸಿದ್ದಪ್ಪ ಪನ್ನಾಪುರ ವಕೀಲ, ನಾರಾಯಣಪ್ಪ ಈಡಿಗೇರ, ಬೂದಿ ಗಿರಿಯಪ್ಪ, ಪಂಪಾಪತಿ ಪೂಜಾರ, ರಾಮಣ್ಣ ಬಡಿಗೇರ, ಸಂಜೀವಪ್ಪ ಸಾಲೋಣಿ, ಪರಸಪ್ಪ ಸುದ್ದಿ, ಲಿಂಗಪ್ಪ ರೌಡಕುಂದಿ, ಶರಣಪ್ಪ ದಿವಟರ, ಶಿವಪ್ಪ ಉದ್ಯಾಳ, ಚನ್ನಹಳ್ಳಿ ಮಲ್ಲಾರಡ್ಡಿ, ಬಸವರಾಜ ಹತ್ತಿಕಾಳ ಸಹಿತ ಅನೇಕ ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ</strong>: ಕಾಲುವೆ ಗ್ಯಾಂಗ್ಮನ್ ಸಹಕಾರದೊಂದಿಗೆ ಕಾಲುವೆ ನೀರು ಕಳ್ಳತನವಾಗುತ್ತಿದ್ದು, ಕೆಳಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ನೀರು ಕಳ್ಳತನ ತಡೆಗಟ್ಟಿ, ಕೆಳಭಾಗದ ರೈತರಿಗೆ ನೀರು ಸಿಗುವಂತೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ಪಟ್ಟಣದಲ್ಲಿರುವ ನಂಬರ್ 2 ಕಾಲುವೆ ಕಚೇರಿಗೆ ರೈತರು ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.</p>.<p>ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ರೈತರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸಬೇಕು. ಕೆಳಭಾಗದ ರೈತರ ಜಮೀನುಗಳಿಗೆ ತಕ್ಷಣ ನೀರು ಹರಿಸಬೇಕು ಎಂದು ಒತ್ತಾಯಿಸಿದರು.</p>.<p>32ನೇ ವಿತರಣಾ ಕಾಲುವೆ ವ್ಯಾಪ್ತಿಯ ಕಾರಟಗಿ, ಚನ್ನಳ್ಳಿ ಮತ್ತು ಕೊಂತನೂರು ಗ್ರಾಮದ ರೈತರು ಪ್ರತಿಭಟನೆ ನಡೆಸಿ, ಇಲಾಖೆಯ ಎಂಜಿನಿಯರ್ ಸುಬ್ರಹ್ಮಣ್ಯ ಅವರೊಂದಿಗೆ ಚರ್ಚೆ ನಡೆಸಿ, ಅಕ್ರಮ ನೀರುಗಳ್ಳತನಕ್ಕೆ ಕಡಿವಾಣ ಹಾಕಬೇಕು ಎಂದು ರೈತರು ಆಗ್ರಹಿಸಿದರು.</p>.<p>ನಾಲೆಯಲ್ಲಿ ತುಂಬಿರುವ ಹೂಳು ತಗೆಯಿಸಬೇಕು. ಗಿಡಗಂಟೆ ಸ್ವಚ್ಛಗೊಳಿಸಬೇಕು. ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡಬೇಕು ಎಂದು ರೈತರು ಆಗ್ರಹಿಸಿದರು.</p>.<p>ಎಂಜಿನಿಯರ್ ಸುಬ್ರಹ್ಮಣ್ಯ ಮಾತನಾಡಿ, ನಮ್ಮ ನೇತೃತ್ವದ ತಂಡವು, ಭಾನುವಾರ ನೀರು ಕಳ್ಳತನ ಮಾಡಲು 32/3ರ ಉಪಕಾಲುವೆ ಮೇಲ್ಭಾಗದ ಬೇವಿನಾಳ, ಮೈಲಾಪುರ ಸೀಮೆಯಲ್ಲಿ ಅಕ್ರಮವಾಗಿ ಅಳವಡಿಸಿದ್ದ 14 ಪೈಪ್ಗಳನ್ನು ತೆರವುಗೊಳಿಸಿದೆ. ರೈತರಿಗೆ ನಿಯಮಾನುಸಾರ ಅವರ ಪಾಲಿನ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.</p>.<p>ರೈತರಾದ ಗವಿಸಿದ್ದಪ್ಪ ಪನ್ನಾಪುರ ವಕೀಲ, ನಾರಾಯಣಪ್ಪ ಈಡಿಗೇರ, ಬೂದಿ ಗಿರಿಯಪ್ಪ, ಪಂಪಾಪತಿ ಪೂಜಾರ, ರಾಮಣ್ಣ ಬಡಿಗೇರ, ಸಂಜೀವಪ್ಪ ಸಾಲೋಣಿ, ಪರಸಪ್ಪ ಸುದ್ದಿ, ಲಿಂಗಪ್ಪ ರೌಡಕುಂದಿ, ಶರಣಪ್ಪ ದಿವಟರ, ಶಿವಪ್ಪ ಉದ್ಯಾಳ, ಚನ್ನಹಳ್ಳಿ ಮಲ್ಲಾರಡ್ಡಿ, ಬಸವರಾಜ ಹತ್ತಿಕಾಳ ಸಹಿತ ಅನೇಕ ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>