ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ಡೌನ್ ಜಾರಿಗೊಳಿಸಿದ್ದ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ಅನೇಕ ಜನರಿಗೆ ಉದ್ಯೋಗವಿಲ್ಲದೆ ಆಹಾರ ಕೊರತೆ ಎದುರಾಗಿದ್ದು. ಹಾಗಾಗಿ ಸಾರ್ವಜನಿಕರು, ಜಿಲ್ಲೆ ಮತ್ತು ರಾಜ್ಯದ ವಿವಿಧ ಕಂಪೆನಿಗಳು, ಕಾರ್ಖಾನೆಗಳು ಆಹಾರದ ಕಿಟ್ಗಳನ್ನು ದೇಣಿಗೆ ನೀಡಿದ್ದರು. ಈ ಕಿಟ್ಗಳನ್ನು ತಾಲ್ಲೂಕಿಗೆ ಪೂರೈಸಿದ್ದ ಜಿಲ್ಲಾಡಳಿತ ಅಗತ್ಯ ಉಳ್ಳವರಿಗೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ, ವಿತರಣೆಯಾಗಿಲ್ಲ.