ಇನ್ನೂ ಹನುಮಜಯಂತಿ, ಹನುಮಮಾಲಾ ವಿಸರ್ಜನೆ ವೇಳೆ ಬಸ್, ಕಾರು ಸೇರಿ ದ್ವಿಚಕ್ರ ವಾಹನಗಳಿಗೆ ಈ ಮೈದಾನವನ್ನೇ ಪಾರ್ಕಿಂಗ್ ವ್ಯವಸ್ಥೆಗಾಗಿ ಬಳಸಲಾಗುತ್ತದೆ. ಜೊತೆಗೆ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿ, ರಾಜ್ಯಪಾಲ ಸೇರಿ ಯಾರೇ ಬರಲಿ ಅವರ ಹೆಲಿಕಾಪ್ಟರ್ ನಿಲ್ಲಲು ಈ ಮೈದಾನದಲ್ಲೆ ಹೆಲಿಪ್ಯಾಡ್ ರಚಿಸಲಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಕಾನೂನು ಪ್ರಕಾರ ಜಮೀನು ಮಾಲೀಕನಿಂದ ಸ್ವತ್ತು ಪಡೆದು, ಪರಿಹಾರವಾಗಿ ಜಮೀನು ಇಲ್ಲವೇ ಪರಿಹಾರ ಧನ ಸಂದಾಯ ಮಾಡಿ, ಈ ಉತ್ಸವ ಮೈದಾನವನ್ನು ಆನೆಗೊಂದಿ ಗ್ರಾಮ ಪಂಚಾಯಿತಿಗೆ ಸುಪರ್ದಿಗೆ ಒದಗಿಸಿ ಕೊಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.