‘ಬುಧವಾರ ನಾಲ್ಕು ಜನರಿಗೆ ದಾಖಲಾತಿ ನೀಡಲಾಗಿದೆ. ಕೊಪ್ಪಳ ತಹಶೀಲ್ದಾರ್ ಅಮರೇಶ ಬಿರಾದಾರ್ ಸಮಸ್ಯೆ ಪರಿಹರಿಸಿದ್ದಾರೆ. ಹೀಗಾಗಿ ಧರಣಿ ವಾಪಸ್ ಪಡೆದಿದ್ದೇವೆ. ಗುರುವಾರದಿಂದ ಅರ್ಜಿ ಸಲ್ಲಿಸದವರಿಗೆ ಸರತಿ ಮೇಲೆ ಫಾರ್ಮ್ ನಂಬರ್ 3 ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದು ಹೋರಾಟ ಸಮಿತಿ ಅಧ್ಯಕ್ಷ ಗ್ಯಾನೇಶ್ ಹ್ಯಾಟಿ ತಿಳಿಸಿದರು.