<p><strong>ಕುಕನೂರು:</strong> ಮುಂಗಾರಿನ ಆರಂಭದಲ್ಲಿ ಅಬ್ಬರಿಸಿದ್ದ ಮಳೆ ಬಳಿಕ ಒಂದು ತಿಂಗಳ ಕಾಲ ಕೈ ಕೊಟ್ಟು ಈಗ ಎಂಟು ದಿನಗಳಿಂದ ಮತ್ತೆ ಸುರಿಯುತ್ತಿದೆ. ನಿರಂತರ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಹೆಸರು ಬೆಳೆಗೆ ಹಳದಿ ರೋಗ, ಬೂದುರೋಗ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮನೆಮಾಡಿದೆ.</p><p>ಹೆಸರು ಬೆಳೆ ಹಳದಿ, ಬೂದು ಬಣ್ಣಕ್ಕೆ ತಿರುಗುತ್ತಿದ್ದು ಬೆಳವಣಿಗೆ ಕುಂಠಿತಗೊಂಡು ಇಳುವರಿ ಬಾರದೇ ನಾಶವಾಗುವ ಭೀತಿ ಎದುರಾಗಿದೆ. ಹೂವುಗಳು ಕೂಡ ಕಡಿಮೆ ಸಂಖ್ಯೆಯಲ್ಲಿವೆ. ಹೂವು ಬಿಟ್ಟ ಕಾಯಿಗಳೂ ಹಳದಿ ಬಣ್ಣದಿಂದ ಅಂಕುಡೊಂಕು ಆಗಿವೆ. ಶೇ 48ರಷ್ಟು ಬೆಳೆ ನಾಶ ಭೀತಿ ಎದುರಾಗಿದೆ.</p><p>ತಾಲ್ಲೂಕಿನಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಹಳದಿ ನಂಜಾಣು ರೋಗಕ್ಕೆ ಹುಳು-ಕೀಟ ಕಾರಣವಾಗಿದ್ದು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹೋಗಿ ರಸ ಹೀರುವುದರಿಂದ ಈ ವೈರಾಣು ಗಿಡದಿಂದ ಗಿಡಕ್ಕೆ ಹರಡುತ್ತದೆ. ಪ್ರಾರಂಭದಲ್ಲೇ ನಿಯಂತ್ರಿಸಬೇಕು. ರೋಗ ಕಾಣಿಸಿಕೊಂಡ ಗಿಡಗಳನ್ನು ತಕ್ಷಣ ಕಿತ್ತು ನೆಲದಲ್ಲಿ ಹೂಳಬೇಕು ಅಥವಾ ಸುಡಬೇಕು. ಆರಂಭದಿಂದಲೇ ಕೀಟನಾಶಕ ಬಳಕೆ ಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ನಾಗರಾಜ ಮಾಹಿತಿ ನೀಡಿದರು.</p><p>‘ರೈತರು ₹1,500 ಕೊಟ್ಟು 5 ಕೆ.ಜಿ ಬಿತ್ತನೆ ಬೀಜದ ಪ್ಯಾಕೆಟ್ ಖರೀದಿ ಮಾಡಿ ಬಿತ್ತನೆ ಮಾಡಿದ್ದಾರೆ. ಈ ರೋಗಕ್ಕೆ ಯಾವುದೇ ಔಷಧಿ ಉಪಚಾರ ಇಲ್ಲ. ಕೃಷಿ ಅಧಿಕಾರಿಗಳು ಈವರೆಗೂ ಜಮೀನುಗಳಿಗೆ ಭೇಟಿ ನೀಡಿ ರೋಗ ನಿಯಂತ್ರಣ ಕುರಿತು ಮಾಹಿತಿ ನೀಡುತ್ತಿಲ್ಲ’ ಎಂಬುದು ರೈತರ ಆರೋಪ.</p><p>ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ಮಾಡಬೇಕು. ಹೆಸರು ಬೆಳೆಗೆ ವಿಮೆ ಮಾಡಿಸುತ್ತಿದ್ದು ಸರ್ಕಾರ ವಿಮೆ ಕಂಪನಿಗೆ ತಿಳಿಹೇಳಿ ಹಾನಿಯಾದ ಕುರಿತು ವರದಿ ಸಲ್ಲಿಸಿ ವಿಮೆ ಕಂಪನಿ ಅಥವಾ ಸರ್ಕಾರದಿಂದ ಪರಿಹಾರ ದೊರೆಯುವಂತೆ ಮಾಡಬೇಕು ಎನ್ನುವುದು ರೈತರ ಆಗ್ರಹ. </p>.<p><strong>‘ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ’</strong></p><p>ಸತತ ಮಳೆಯಿಂದ ರೈತರ ಜಮೀನುಗಳಿಗೆ ಭೇಟಿ ನೀಡಿ ರೋಗ ನಿಯಂತ್ರಣದ ಬಗ್ಗೆ ಮಾಹಿತಿ ನೀಡಲು ಆಗುತ್ತಿಲ್ಲ. ಮಳೆ ಸ್ವಲ್ಪ ಕಡಿಮೆಯಾದರೆ ರೈತರ ಜಮೀನುಗಳಿಗೆ ಕೃಷಿ ವಿಜ್ಞಾನಿಗಳೊಂದಿಗೆ ಭೇಟಿ ನೀಡಿ ಮಾಹಿತಿ ನೀಡುತ್ತೇವೆ. ರೈತರು ಹಳದಿ ಬೂದು ರೋಗಕ್ಕೆ ಥಯೋಮೈತಕ್ಝಾನ್ 1 ಟ್ಯಾಂಕ್ಗೆ 6-8 ಮಿ.ಲೀ ಅಥವಾ ಒಲವಿನ್ ಫೆಕ್ಸು 15 ಮಿ.ಲೀ ಹಾಕಿ ಸಿಂಪಡಣೆ ಮಾಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ಸಹಾಯಕ ಕೃಷಿ ಅಧಿಕಾರಿ ಪ್ರಮೋದ್ ತಿಳಿಸಿದರು.</p>.<div><blockquote>ಸರ್ಕಾರದ ಖರೀದಿ ಕೇಂದ್ರದಿಂದ ಹೆಸರು ಬೀಜ ಖರೀದಿಸಿ ಬಿತ್ತನೆ ಮಾಡಿದ್ದೇನೆ. 2 ಬಾರಿ ಔಷಧೋಪಚಾರ ಮಾಡಿದರೂ ರೋಗ ನಿಯಂತ್ರಣ ಆಗುತ್ತಿಲ್ಲ. ಖರ್ಚು ಮರಳಿ ಬಾರದ ಪರಿಸ್ಥಿತಿ ಇದೆ </blockquote><span class="attribution">–ಸಂಗಮೇಶ, ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಕನೂರು:</strong> ಮುಂಗಾರಿನ ಆರಂಭದಲ್ಲಿ ಅಬ್ಬರಿಸಿದ್ದ ಮಳೆ ಬಳಿಕ ಒಂದು ತಿಂಗಳ ಕಾಲ ಕೈ ಕೊಟ್ಟು ಈಗ ಎಂಟು ದಿನಗಳಿಂದ ಮತ್ತೆ ಸುರಿಯುತ್ತಿದೆ. ನಿರಂತರ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಹೆಸರು ಬೆಳೆಗೆ ಹಳದಿ ರೋಗ, ಬೂದುರೋಗ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮನೆಮಾಡಿದೆ.</p><p>ಹೆಸರು ಬೆಳೆ ಹಳದಿ, ಬೂದು ಬಣ್ಣಕ್ಕೆ ತಿರುಗುತ್ತಿದ್ದು ಬೆಳವಣಿಗೆ ಕುಂಠಿತಗೊಂಡು ಇಳುವರಿ ಬಾರದೇ ನಾಶವಾಗುವ ಭೀತಿ ಎದುರಾಗಿದೆ. ಹೂವುಗಳು ಕೂಡ ಕಡಿಮೆ ಸಂಖ್ಯೆಯಲ್ಲಿವೆ. ಹೂವು ಬಿಟ್ಟ ಕಾಯಿಗಳೂ ಹಳದಿ ಬಣ್ಣದಿಂದ ಅಂಕುಡೊಂಕು ಆಗಿವೆ. ಶೇ 48ರಷ್ಟು ಬೆಳೆ ನಾಶ ಭೀತಿ ಎದುರಾಗಿದೆ.</p><p>ತಾಲ್ಲೂಕಿನಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಹಳದಿ ನಂಜಾಣು ರೋಗಕ್ಕೆ ಹುಳು-ಕೀಟ ಕಾರಣವಾಗಿದ್ದು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹೋಗಿ ರಸ ಹೀರುವುದರಿಂದ ಈ ವೈರಾಣು ಗಿಡದಿಂದ ಗಿಡಕ್ಕೆ ಹರಡುತ್ತದೆ. ಪ್ರಾರಂಭದಲ್ಲೇ ನಿಯಂತ್ರಿಸಬೇಕು. ರೋಗ ಕಾಣಿಸಿಕೊಂಡ ಗಿಡಗಳನ್ನು ತಕ್ಷಣ ಕಿತ್ತು ನೆಲದಲ್ಲಿ ಹೂಳಬೇಕು ಅಥವಾ ಸುಡಬೇಕು. ಆರಂಭದಿಂದಲೇ ಕೀಟನಾಶಕ ಬಳಕೆ ಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ನಾಗರಾಜ ಮಾಹಿತಿ ನೀಡಿದರು.</p><p>‘ರೈತರು ₹1,500 ಕೊಟ್ಟು 5 ಕೆ.ಜಿ ಬಿತ್ತನೆ ಬೀಜದ ಪ್ಯಾಕೆಟ್ ಖರೀದಿ ಮಾಡಿ ಬಿತ್ತನೆ ಮಾಡಿದ್ದಾರೆ. ಈ ರೋಗಕ್ಕೆ ಯಾವುದೇ ಔಷಧಿ ಉಪಚಾರ ಇಲ್ಲ. ಕೃಷಿ ಅಧಿಕಾರಿಗಳು ಈವರೆಗೂ ಜಮೀನುಗಳಿಗೆ ಭೇಟಿ ನೀಡಿ ರೋಗ ನಿಯಂತ್ರಣ ಕುರಿತು ಮಾಹಿತಿ ನೀಡುತ್ತಿಲ್ಲ’ ಎಂಬುದು ರೈತರ ಆರೋಪ.</p><p>ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ಮಾಡಬೇಕು. ಹೆಸರು ಬೆಳೆಗೆ ವಿಮೆ ಮಾಡಿಸುತ್ತಿದ್ದು ಸರ್ಕಾರ ವಿಮೆ ಕಂಪನಿಗೆ ತಿಳಿಹೇಳಿ ಹಾನಿಯಾದ ಕುರಿತು ವರದಿ ಸಲ್ಲಿಸಿ ವಿಮೆ ಕಂಪನಿ ಅಥವಾ ಸರ್ಕಾರದಿಂದ ಪರಿಹಾರ ದೊರೆಯುವಂತೆ ಮಾಡಬೇಕು ಎನ್ನುವುದು ರೈತರ ಆಗ್ರಹ. </p>.<p><strong>‘ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ’</strong></p><p>ಸತತ ಮಳೆಯಿಂದ ರೈತರ ಜಮೀನುಗಳಿಗೆ ಭೇಟಿ ನೀಡಿ ರೋಗ ನಿಯಂತ್ರಣದ ಬಗ್ಗೆ ಮಾಹಿತಿ ನೀಡಲು ಆಗುತ್ತಿಲ್ಲ. ಮಳೆ ಸ್ವಲ್ಪ ಕಡಿಮೆಯಾದರೆ ರೈತರ ಜಮೀನುಗಳಿಗೆ ಕೃಷಿ ವಿಜ್ಞಾನಿಗಳೊಂದಿಗೆ ಭೇಟಿ ನೀಡಿ ಮಾಹಿತಿ ನೀಡುತ್ತೇವೆ. ರೈತರು ಹಳದಿ ಬೂದು ರೋಗಕ್ಕೆ ಥಯೋಮೈತಕ್ಝಾನ್ 1 ಟ್ಯಾಂಕ್ಗೆ 6-8 ಮಿ.ಲೀ ಅಥವಾ ಒಲವಿನ್ ಫೆಕ್ಸು 15 ಮಿ.ಲೀ ಹಾಕಿ ಸಿಂಪಡಣೆ ಮಾಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ಸಹಾಯಕ ಕೃಷಿ ಅಧಿಕಾರಿ ಪ್ರಮೋದ್ ತಿಳಿಸಿದರು.</p>.<div><blockquote>ಸರ್ಕಾರದ ಖರೀದಿ ಕೇಂದ್ರದಿಂದ ಹೆಸರು ಬೀಜ ಖರೀದಿಸಿ ಬಿತ್ತನೆ ಮಾಡಿದ್ದೇನೆ. 2 ಬಾರಿ ಔಷಧೋಪಚಾರ ಮಾಡಿದರೂ ರೋಗ ನಿಯಂತ್ರಣ ಆಗುತ್ತಿಲ್ಲ. ಖರ್ಚು ಮರಳಿ ಬಾರದ ಪರಿಸ್ಥಿತಿ ಇದೆ </blockquote><span class="attribution">–ಸಂಗಮೇಶ, ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>