ಪಟ್ಟಣದ ಕುಡಿಯುವ ನೀರಿನ ಪ್ರಮುಖ ಜಲಮೂಲವಾಗಿದ್ದ ಈ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದರೂ ಅಭಿವೃದ್ಧಿ ಕಾಣದೆ ದುರವಸ್ಥೆಗೀಡಾಗಿತ್ತು. ಸರ್ಕಾರದ ನೆರೆವಿಲ್ಲದೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ಕೆಲ ಕಂಪೆನಿಗಳು ನೀಡಿದ ₹ 1 ಕೋಟಿ ದೇಣಿಗೆಯಲ್ಲಿ ಅಭಿವೃದ್ಧಿಗೊಂಡಿತ್ತು. ಅಪಾರ ಪ್ರಮಾಣದಲ್ಲಿ ಹೂಳು ತೆಗೆದಿದ್ದರಿಂದ ಕಳೆದ ವರ್ಷದ ಹಿಂಗಾರಿನಲ್ಲಿ ಕೆರೆ ಭರ್ತಿಯಾಗಿ ಶ್ರಮವಹಿಸಿದ್ದ ಜನರಲ್ಲಿ ಸಂತಸ ತಂದಿತ್ತು.