<p><strong>ಕೊಪ್ಪಳ:</strong> ‘ಹೆಣ್ಣುಮಕ್ಕಳು ಗಂಡನ ಮನೆಗೆ ಹೋಗುವಾಗ ಅಳುವುದು ಸಹಜ. ಆದರೆ ಮರುದಿನದಿಂದ ಅವರು ಜೀವನ ಪರ್ಯಂತ ನಗುತ್ತಿರಬೇಕು’ ಎಂದು ಕಾಗಿನೆಲೆ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಪೀಠಾಧಿಪತಿ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.</p>.<p>ತಾಲೂಕಿನ ಹಾಲವರ್ತಿ ಗ್ರಾಮದ ಕನಕಗುರು ಪೀಠದ ಶಾಖ ಮಠದ ಜಡೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ 14 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಹೆಂಡತಿಯನ್ನು ಪ್ರೀತಿಯಿಂದ ತವರು ಮನೆಗೆ ಕಳಿಸಿ. ಆದರೆ ವರದಕ್ಷಿಣೆಗಾಗಿ ಹೆಂಡತಿಯನ್ನು ಯಾವತ್ತೂ ತವರು ಮನೆಗೆ ಕಳಿಸಬೇಡಿ’ ಎಂದು ಸಲಹೆ ನೀಡಿದರು.</p>.<p>ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ‘ಸಾಮೂಹಿಕ ವಿವಾಹಗಳು ಹೆಚ್ಚು ನಡೆಯಬೇಕು. ಇದರಿಂದ ಒಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಬಡವರಿಗೆ ಸಾಲದ ಹೊರೆ ತಪ್ಪುತ್ತದೆ. ಗ್ರಾಮಗಳಲ್ಲಿ ಇಂಥ ವಿವಾಹಗಳು ನಡೆಯುವುದರಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟು ಹಾಗೂ ಬಾಂಧವ್ಯ ವೃದ್ಧಿಯಾಗುತ್ತದೆ’ ಎಂದರು.</p>.<p>ಕನಕ ಗುರುಪೀಠದ ಕೆ.ಆರ್. ನಗರ ಸಂಸ್ಥಾನ ಮಠದ ಶಿವಾನಂದಪುರಿ ಸ್ವಾಮೀಜಿ, ಬಾದಿಮನಾಳ ಹಾಗೂ ಹಾಲವರ್ತಿ ಪೀಠದ ಶಿವಸಿದ್ದೇಶ್ವರ ಸ್ವಾಮೀಜಿ, ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ, ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ಎಂಎಸ್ಪಿಎಲ್ ಕಂಪನಿ ಇಡಿ ಪ್ರಭು, ಎಸ್.ಕೆ. ಸ್ಟೀಲ್ ಕಂಪನಿ ವ್ಯವಸ್ಥಾಪಕ ಪ್ರಭು, ಮುಖಂಡರಾದ ಭರಮಪ್ಪ ನಗರ, ಗೂಳಪ್ಪ ಹಲಗೇರಿ, ವೆಂಕಟೇಶ್ ಬಾರಕೇರ, ಹನುಮಂತಪ್ಪ ಅರಸನಕೇರಿ, ಬಸವರಾಜ ಬಂಗಾಳಿ, ಪತ್ರಕರ್ತರಾದ ದೇವು ನಾಗನೂರ, ಕುಬೇರ ಮಜ್ಜಿಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.</p>.<div><blockquote>ಸಾಮೂಹಿಕ ವಿವಾಹದಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಲಿದೆ. ಹೊಸ ಬದುಕಿಗೆ ಪದಾರ್ಪಣೆ ಮಾಡಿದ ನವ ದಂಪತಿ ತಮ್ಮ ಮಕ್ಕಳ ಭವಿಷ್ಯವನ್ನು ಸುಂದರವಾಗಿ ರೂಪಿಸಿ ಉನ್ನತ ಹುದ್ದೆಗೇರಿಸುವ ಕೆಲಸ ಮಾಡಲಿ. </blockquote><span class="attribution">– ಜಿ.ಬಿ. ವಿನಯಕುಮಾರ್, ಇನ್ಸೈಟ್ ಐಎಎಸ್ ಸಂಸ್ಥಾಪಕ ನಿರ್ದೇಶಕ</span></div>
<p><strong>ಕೊಪ್ಪಳ:</strong> ‘ಹೆಣ್ಣುಮಕ್ಕಳು ಗಂಡನ ಮನೆಗೆ ಹೋಗುವಾಗ ಅಳುವುದು ಸಹಜ. ಆದರೆ ಮರುದಿನದಿಂದ ಅವರು ಜೀವನ ಪರ್ಯಂತ ನಗುತ್ತಿರಬೇಕು’ ಎಂದು ಕಾಗಿನೆಲೆ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಪೀಠಾಧಿಪತಿ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.</p>.<p>ತಾಲೂಕಿನ ಹಾಲವರ್ತಿ ಗ್ರಾಮದ ಕನಕಗುರು ಪೀಠದ ಶಾಖ ಮಠದ ಜಡೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ 14 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಹೆಂಡತಿಯನ್ನು ಪ್ರೀತಿಯಿಂದ ತವರು ಮನೆಗೆ ಕಳಿಸಿ. ಆದರೆ ವರದಕ್ಷಿಣೆಗಾಗಿ ಹೆಂಡತಿಯನ್ನು ಯಾವತ್ತೂ ತವರು ಮನೆಗೆ ಕಳಿಸಬೇಡಿ’ ಎಂದು ಸಲಹೆ ನೀಡಿದರು.</p>.<p>ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ‘ಸಾಮೂಹಿಕ ವಿವಾಹಗಳು ಹೆಚ್ಚು ನಡೆಯಬೇಕು. ಇದರಿಂದ ಒಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಬಡವರಿಗೆ ಸಾಲದ ಹೊರೆ ತಪ್ಪುತ್ತದೆ. ಗ್ರಾಮಗಳಲ್ಲಿ ಇಂಥ ವಿವಾಹಗಳು ನಡೆಯುವುದರಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟು ಹಾಗೂ ಬಾಂಧವ್ಯ ವೃದ್ಧಿಯಾಗುತ್ತದೆ’ ಎಂದರು.</p>.<p>ಕನಕ ಗುರುಪೀಠದ ಕೆ.ಆರ್. ನಗರ ಸಂಸ್ಥಾನ ಮಠದ ಶಿವಾನಂದಪುರಿ ಸ್ವಾಮೀಜಿ, ಬಾದಿಮನಾಳ ಹಾಗೂ ಹಾಲವರ್ತಿ ಪೀಠದ ಶಿವಸಿದ್ದೇಶ್ವರ ಸ್ವಾಮೀಜಿ, ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ, ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ಎಂಎಸ್ಪಿಎಲ್ ಕಂಪನಿ ಇಡಿ ಪ್ರಭು, ಎಸ್.ಕೆ. ಸ್ಟೀಲ್ ಕಂಪನಿ ವ್ಯವಸ್ಥಾಪಕ ಪ್ರಭು, ಮುಖಂಡರಾದ ಭರಮಪ್ಪ ನಗರ, ಗೂಳಪ್ಪ ಹಲಗೇರಿ, ವೆಂಕಟೇಶ್ ಬಾರಕೇರ, ಹನುಮಂತಪ್ಪ ಅರಸನಕೇರಿ, ಬಸವರಾಜ ಬಂಗಾಳಿ, ಪತ್ರಕರ್ತರಾದ ದೇವು ನಾಗನೂರ, ಕುಬೇರ ಮಜ್ಜಿಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.</p>.<div><blockquote>ಸಾಮೂಹಿಕ ವಿವಾಹದಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಲಿದೆ. ಹೊಸ ಬದುಕಿಗೆ ಪದಾರ್ಪಣೆ ಮಾಡಿದ ನವ ದಂಪತಿ ತಮ್ಮ ಮಕ್ಕಳ ಭವಿಷ್ಯವನ್ನು ಸುಂದರವಾಗಿ ರೂಪಿಸಿ ಉನ್ನತ ಹುದ್ದೆಗೇರಿಸುವ ಕೆಲಸ ಮಾಡಲಿ. </blockquote><span class="attribution">– ಜಿ.ಬಿ. ವಿನಯಕುಮಾರ್, ಇನ್ಸೈಟ್ ಐಎಎಸ್ ಸಂಸ್ಥಾಪಕ ನಿರ್ದೇಶಕ</span></div>