20ಕ್ಕೂ ಹೆಚ್ಚು ವೈದ್ಯರಿಂದ ಪರೀಕ್ಷೆ, ಚಿಕಿತ್ಸೆ: ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡುವ ಶಿಬಿರದಲ್ಲಿ ಸಿದ್ದಾಪುರವಲ್ಲದೆ ಕೊಟ್ನೆಕಲ್, ಬರಗೂರು, ಕಿಂದಕ್ಯಾಂಪ್, ರವಿನಗರ, ಹುಳ್ಕಿಹಾಳ, ಗುಂಡೂರು,
ಎಸ್. ಬಿ. ರಡ್ಡಿಕ್ಯಾಂಪ್, ಮುಸ್ಟೂರು, ಲಕ್ಷ್ಮೀಕ್ಯಾಂಪ್ ಮೊದಲಾದ ಗ್ರಾಮಗಳ ನೂರಾರು ಜನರು ವಿವಿಧ ಕಾಯಿಲೆಗಳ ಪರೀಕ್ಷೆ, ಚಿಕಿತ್ಸೆಗೊಳಗಾದರು.
ಬೆಂಗಳೂರು, ಗಂಗಾವತಿ ಸಹಿತ ವಿವಿಧೆಡೆಯ 20ಕ್ಕೂ ಹೆಚ್ಚು ನುರಿತ ವೈದ್ಯರು ರಕ್ತ ತಪಾಸಣೆ, ಸ್ತನ ಕ್ಯಾನ್ಸರ್, ಕಣ್ಣು, ಹೃದಯ, ತಲೆ, ಹೊಟ್ಟೆಗೆ ಸಂಬಂಧಿಸಿಸಿ ನಾನಾ ರೋಗಗಳ ಬಗ್ಗೆ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಿದರು.