ಯುವಕ ವೀರೇಶ, ನಾಲ್ವರು ಗೆಳೆಯರ ಜತೆ ಅಂಜನಾದ್ರಿ ದರ್ಶನಕ್ಕೆ ಬಂದಿದ್ದರು. ಮಧ್ಯಾಹ್ನ ಬೆಟ್ಟ ಏರುವಾಗ ಮೂರ್ಛೆ ಬಂದು ಮೆಟ್ಟಿಲು ಮೇಲೆ ಬಿದ್ದರು. ಆಗ ಜತೆಗಿದ್ದವರು ಮತ್ತು ದೇವಸ್ಥಾನ ಸಿಬ್ಬಂದಿ ಆಟೊ ಮೂಲಕ ಆನೆಗೊಂದಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ನಂತರ ‘ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಗಂಗಾವತಿ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸುವಾಗ ಮೃತಪಟ್ಟಿದ್ದಾರೆ’ ಎಂದು ವೈದ್ಯರು ತಿಳಿಸಿದ್ದಾರೆ.