ಕುಕನೂರು, ಮುನಿರಾಬಾದ್, ತಾವರಗೇರಾ, ಕನಕಗಿರಿ, ಕುಷ್ಟಗಿ, ಅಳವಂಡಿ ಹಾಗೂ ಹನುಮಸಾಗರ ಭಾಗದಲ್ಲಿ ಮಂಗಳವಾರ
ಬೆಳಿಗ್ಗೆ 5 ಗಂಟೆಯಿಂದ ನಿರಂತರ ಮಳೆ ಬೀಳುತ್ತಿದ್ದು, ನಾಗರ ಪಂಚಮಿ ಹಬ್ಬ ಆಚರಣೆಗೆ ಅಡಚಣೆಯಾಗಿದೆ. ಹೆಸರು ಬೆಳೆಗಳು ಮೊಳಕೆ ಬಂದಿದ್ದು, ಅತಿಯಾದ ತೇವಾಂಶದಿಂದ ಮೆಕ್ಕೆಜೋಳ ಲದ್ದಿ ಹುಳುಗಳ ಕಾಟ ಶುರುವಾಗಿದೆ.