ಆನೆಗೊಂದಿ ಗ್ರಾಮದ ಚಿಂತಾಮಣಿಗೆ ರಸ್ತೆ ಮಾರ್ಗದಲ್ಲಿರುವ ಗೋಪುರದಲ್ಲಿ ನಿವಾಸಿಗಳು ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿರುವುದು
ಆನೆಗೊಂದಿ ಗ್ರಾಮದ ಹೊರವಲಯದಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ವಿಜಯನಗರ ಕಾಲದ ಕಲ್ಲು ಅಗಸಿ (ಮಂಟಪ) ಬಳಿ ಮದ್ಯ ಸೇವನೆ ಮಾಡಿ ಬಾಟಲ್ ಬಿಸಾಡಿರುವುದು
ಆನೆಗೊಂದಿ ಗ್ರಾಮದಿಂದ ತಳವಾರಘಟ್ಟಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿರುವ ಮಂಟಪದಲ್ಲಿ ಗಿಡ-ಗಂಟಿಗಳು ಬೆಳೆದಿರುವುದು
ಆನೆಗೊಂದಿ ಗ್ರಾಮದ ಚಿಂತಾಮಣಿ ಬಳಿ ಖಾಲಿ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲ ಬಟ್ಟೆ ಎಸೆದು ಗಲೀಜು ಮಾಡಲಾಗಿದೆ

ಆನೆಗೊಂದಿ ಭಾಗದ ಸ್ಮಾರಕಗಳಿಗೆ ಆದ್ಯತೆ ನೀಡಲಾಗುವುದು. ಕೃಷ್ಣದೇವರಾಯ ಸಮಾಧಿ ಸ್ಮಾರಕ ಸೇರಿ ಎಲ್ಲ ಐತಿಹಾಸಿಕ ಸ್ಥಳಗಳ ರಕ್ಷಣೆಗೆ ಒತ್ತು ಕೊಡಲಾಗುವುದು
ಎಚ್.ಕೆ. ಪಾಟೀಲ ಪ್ರವಾಸೋದ್ಯಮ ಸಚಿವ
ಆನೆಗೊಂದಿ ಗ್ರಾಮದ ಮಂಟಪ, ಸ್ಮಾರಕ, ಗೋಪುರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ಕಾಣಸಿಗುತ್ತದೆ. ಇವುಗಳ ರಕ್ಷಣೆಗೆ ಮುಂದಾಗಬೇಕು
ವಿಜಯಕುಮಾರ ಆನೆಗೊಂದಿ ನಿವಾಸಿ
ಸ್ಮಾರಕ, ದೇವಾಲಯಗಳ ರಕ್ಷಣೆಗೆ ಸಿಬ್ಬಂದಿ ನಿಯೋಜನೆ ಜೊತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಐತಿಹಾಸಿಕ ಸ್ಥಳಗಳಿದ್ದರೆ ಮಾತ್ರ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯ
ಹರಿಹರದೇವರಾಯ ಆನೆಗೊಂದಿ, ರಾಜವಂಶಸ್ಥ
ಆನೆಗೊಂದಿ, ವಿಜಯನಗರ ಸಾಮ್ರಾಜ್ಯದ ಮಾತೃಸ್ಥಾನ. ಆದರೆ ಹಂಪಿಗೆ ಸಿಕ್ಕಷ್ಟು ಪ್ರಾಧಾನ್ಯತೆ ಆನೆಗೊಂದಿಗೆ ದೊರೆಯದೆ ಇರುವುದು ವಿಷಾದಕರ. ಸ್ಮಾರಕಗಳ ಸಂರಕ್ಷಣೆಗೆ ಸಂಬಂಧಿಸಿದ ಇಲಾಖೆಗಳು ಯೋಜನೆ ರೂಪಿಸಬೇಕಾಗಿದೆ. ಇದಕ್ಕೆ ಜಿಲ್ಲಾಡಳಿತ ಮುತುವರ್ಜಿ ವಹಿಸಲಿ
ಶರಣಬಸಪ್ಪ ಕೋಲ್ಕಾರ ಸಂಶೋಧಕ, ಗಂಗಾವತಿ