ಗಂಧಾಕ್ಷತೆ ಎಂಬುದು ಪೂಜಾ ಕೈಂಕರ್ಯದ ಕಾರ್ಯವಿಧಾನವಾಗಿದ್ದು ವೈದಿಕ ಬ್ರಾಹ್ಮಣರು, ದೇಸಾಯಿ, ಸರ್ಕಾರದವರು, ಅಯ್ಯನವರು ಹೀಗೆ ಉಪನಾಮ ಹೇಳಿ ಪೂಜೆ ಸಲ್ಲಿಸಲಾಗುತ್ತದೆ. ಬೇರೆ ಜಾತಿಯವರ ಹೆಸರು ಬಳಸದೆ ತಾರತಮ್ಯ ಮಾಡಲಾಗುತ್ತಿದೆ ಎನ್ನುವುದು ಒಂದು ಗುಂಪಿನವರ ಆಕ್ಷೇಪವಾಗಿತ್ತು. ಅರ್ಚಕರು ಈ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದ್ದು ಇದೇ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದಿದೆ.