ಈ ಯೋಜನೆ ಜಾರಿಯಾದರೆ ಅಳವಂಡಿ, ರಘುನಾಥನಹಳ್ಳಿ, ಹಟ್ಟಿ, ಹೈದರನಗರ, ಕ್ಯಾಸಲಾಪೂರ, ಹಲವಾಗಲಿ, ನಿಲೋಗಿಪುರ, ಬೋಚನಹಳ್ಳಿ, ಭೈರಾಪೂರ, ಕಂಪ್ಲಿ ಗ್ರಾಮಗಳ ರೈತರ ಜಮೀನುಗಳಿಗೆ ನೀರು ಹರಿಯಲಿದೆ. ಸುಮಾರು 3500 ರಿಂದ 4000 ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 2000 ಕೊಳವೆಬಾವಿಗಳಿವೆ. ಶೇ 80ರಷ್ಟು ಅಂತರ್ಜಲ ಕುಸಿದಿದೆ. ಯೋಜನೆ ಜಾರಿಯಾದರೆ ಅಂತರ್ಜಲ ಹೆಚ್ಚಲಿದೆ ಎಂದು ಹೇಳಿದ್ದಾರೆ.