ಎಲ್.ಪಿಸಿ ಪ್ರಕರಣಗಳ ಪತ್ತೆ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ ನಗರಠಾಣಾ ಪಿಐ ವೆಂಕಟಸ್ವಾಮಿ, ಸಿಬ್ಬಂದಿ ನರಸಪ್ಪ, ವಿಜಯಕುಮಾರ್, ಪ್ರಕಾಶ ಬೆಂಕಿ ಇವರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಪ್ರಕರಣಗಳ ಕಡತ ಪರಿಶೀಲಿಸಿ, 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.