<p><strong>ಮುನಿರಾಬಾದ್:</strong> ಕೊಪ್ಪಳದ ಸಮಾನಮನಸ್ಕ ಶಿಕ್ಷಕರ ತಂಡ ‘ಕಲರವ’ ಎಂಬ ಸಂಘಟನೆ, ಸಮೀಪದ ಮಹಮ್ಮದ್ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣ ಸ್ವಚ್ಛಗೊಳಿಸುವ ಜೊತೆಗೆ ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚಿದ್ದಾರೆ.</p>.<p>ಕಲರವ ಶಿಕ್ಷಕರ ಸೇವಾ ಬಳಗದ ವತಿಯಿಂದ ಈ ತಿಂಗಳ ಸೇವಾ ಕಾರ್ಯವನ್ನು ತಾಲ್ಲೂಕಿನ ಕೊನೆಯ ಹಳ್ಳಿಯಾದ ಮಹ್ಮದ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಂಡು ಆ ಶಾಲೆಯನ್ನು ಸ್ವಚ್ಛಗೊಳಿಸುವ ಜೊತೆಗೆ ಸುಣ್ಣ ಹಾಗೂ ಬಣ್ಣ ಹಚ್ಚುವ ಕಾಯಕದಲ್ಲಿ ಕಲರವ ತಂಡದ ಎಲ್ಲಾ ಸದಸ್ಯರು ನಿರತರಾಗಿದ್ದರು.</p>.<p>ಕೊಪ್ಪಳದ ಸಮಾನ ಮನಸ್ಕ ಶಿಕ್ಷಕರು ಸೇರಿಕೊಂಡು ಶೈಕ್ಷಣಿಕ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ‘ಕಲರವ’ ಶಿಕ್ಷಕರ ಸೇವಾ ಬಳಗ ಎಂಬ ತಂಡ ಮಾಡಿಕೊಂಡು ಪ್ರತಿ ತಿಂಗಳು ಒಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಆ ಶಾಲೆಯನ್ನು ಸ್ವಚ್ಛ ಮಾಡುವುದರ ಜೊತೆಗೆ ಆ ಶಾಲೆಯ ಅಂದಚಂದ ಹೆಚ್ಚು ಮಾಡುವ ಕಾರ್ಯ ಮಾಡುತ್ತಿದೆ. ಅಲ್ಲದೇ ಇದಕ್ಕೆ ತಗುಲುವ ವೆಚ್ಚವನ್ನು ಶಿಕ್ಷಕರೇ ತಮ್ಮ ವೇತನದಲ್ಲಿ ಭರಿಸುತ್ತಾರೆ. ಈಗಾಗಲೇ ತಾಲ್ಲೂಕಿನ 30 ಶಾಲೆಗಳಿಗೆ ಈ ತಂಡ ಸೇವೆ ಸಲ್ಲಿಸಿದೆ. ಮಹ್ಮದ್ ನಗರ ಶಾಲೆಯು 31ನೇ ಶಾಲೆಯಾಗಿದೆ. ಬೆಳಿಗ್ಗೆಯಿಂದ ಸಂಜೆಯ ಹೊತ್ತಿಗೆ ಶಾಲೆಯ ಚಿತ್ರಣ ಬದಲಾಗುತ್ತದೆ. ಕಲರವ ಶಿಕ್ಷಕರ ಕಾರ್ಯಕ್ಕೆ ಅನೇಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.</p>.<p>ತಂಡದಲ್ಲಿ ಬೀರಪ್ಪ ಆಂಡಗಿ ಚಿಲವಾಡಗಿ, ಅಣ್ಣಪ್ಪ ಹಳ್ಳಿ, ಮರ್ದಾನಪ್ಪ ಬೆಲ್ಲದ, ಹನುಮಂತಪ್ಪ ಕುರಿ, ಶರಣಪ್ಪ ರಡ್ಡೇರ, ಹುಲುಗಪ್ಪ ಭಜಂತ್ರಿ, ಮಲ್ಲಪ್ಪ ಗುಡದನ್ನವರ, ವೀರೇಶ ಕೌಟಿ, ಗುರುಸ್ವಾಮಿ.ಆರ್., ಸುರೇಶ ಕಂಬಳಿ, ಕಾಶಿನಾಥ ಸಿರಿಗೇರಿ, ಚಂದ್ರು ಯಳವರ್ ಪಾಲ್ಗೊಂಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನಿರಾಬಾದ್:</strong> ಕೊಪ್ಪಳದ ಸಮಾನಮನಸ್ಕ ಶಿಕ್ಷಕರ ತಂಡ ‘ಕಲರವ’ ಎಂಬ ಸಂಘಟನೆ, ಸಮೀಪದ ಮಹಮ್ಮದ್ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣ ಸ್ವಚ್ಛಗೊಳಿಸುವ ಜೊತೆಗೆ ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚಿದ್ದಾರೆ.</p>.<p>ಕಲರವ ಶಿಕ್ಷಕರ ಸೇವಾ ಬಳಗದ ವತಿಯಿಂದ ಈ ತಿಂಗಳ ಸೇವಾ ಕಾರ್ಯವನ್ನು ತಾಲ್ಲೂಕಿನ ಕೊನೆಯ ಹಳ್ಳಿಯಾದ ಮಹ್ಮದ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಂಡು ಆ ಶಾಲೆಯನ್ನು ಸ್ವಚ್ಛಗೊಳಿಸುವ ಜೊತೆಗೆ ಸುಣ್ಣ ಹಾಗೂ ಬಣ್ಣ ಹಚ್ಚುವ ಕಾಯಕದಲ್ಲಿ ಕಲರವ ತಂಡದ ಎಲ್ಲಾ ಸದಸ್ಯರು ನಿರತರಾಗಿದ್ದರು.</p>.<p>ಕೊಪ್ಪಳದ ಸಮಾನ ಮನಸ್ಕ ಶಿಕ್ಷಕರು ಸೇರಿಕೊಂಡು ಶೈಕ್ಷಣಿಕ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ‘ಕಲರವ’ ಶಿಕ್ಷಕರ ಸೇವಾ ಬಳಗ ಎಂಬ ತಂಡ ಮಾಡಿಕೊಂಡು ಪ್ರತಿ ತಿಂಗಳು ಒಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಆ ಶಾಲೆಯನ್ನು ಸ್ವಚ್ಛ ಮಾಡುವುದರ ಜೊತೆಗೆ ಆ ಶಾಲೆಯ ಅಂದಚಂದ ಹೆಚ್ಚು ಮಾಡುವ ಕಾರ್ಯ ಮಾಡುತ್ತಿದೆ. ಅಲ್ಲದೇ ಇದಕ್ಕೆ ತಗುಲುವ ವೆಚ್ಚವನ್ನು ಶಿಕ್ಷಕರೇ ತಮ್ಮ ವೇತನದಲ್ಲಿ ಭರಿಸುತ್ತಾರೆ. ಈಗಾಗಲೇ ತಾಲ್ಲೂಕಿನ 30 ಶಾಲೆಗಳಿಗೆ ಈ ತಂಡ ಸೇವೆ ಸಲ್ಲಿಸಿದೆ. ಮಹ್ಮದ್ ನಗರ ಶಾಲೆಯು 31ನೇ ಶಾಲೆಯಾಗಿದೆ. ಬೆಳಿಗ್ಗೆಯಿಂದ ಸಂಜೆಯ ಹೊತ್ತಿಗೆ ಶಾಲೆಯ ಚಿತ್ರಣ ಬದಲಾಗುತ್ತದೆ. ಕಲರವ ಶಿಕ್ಷಕರ ಕಾರ್ಯಕ್ಕೆ ಅನೇಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.</p>.<p>ತಂಡದಲ್ಲಿ ಬೀರಪ್ಪ ಆಂಡಗಿ ಚಿಲವಾಡಗಿ, ಅಣ್ಣಪ್ಪ ಹಳ್ಳಿ, ಮರ್ದಾನಪ್ಪ ಬೆಲ್ಲದ, ಹನುಮಂತಪ್ಪ ಕುರಿ, ಶರಣಪ್ಪ ರಡ್ಡೇರ, ಹುಲುಗಪ್ಪ ಭಜಂತ್ರಿ, ಮಲ್ಲಪ್ಪ ಗುಡದನ್ನವರ, ವೀರೇಶ ಕೌಟಿ, ಗುರುಸ್ವಾಮಿ.ಆರ್., ಸುರೇಶ ಕಂಬಳಿ, ಕಾಶಿನಾಥ ಸಿರಿಗೇರಿ, ಚಂದ್ರು ಯಳವರ್ ಪಾಲ್ಗೊಂಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>