<p><strong>ಕಾರಟಗಿ:</strong> ಶಿಕ್ಷಕಿಯೊಬ್ಬರನ್ನು ವಿಳಾಸ ಕೇಳುವ ನೆಪದಲ್ಲಿ ಅವರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನು ಕಾರಟಗಿ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.</p>.<p>ಪಟ್ಟಣದ ಟೀಚರ್ಸ ಕಾಲೋನಿ ನಿವಾಸಿ ಗಂಗಾ ಶಿವಾನಂದ ಅಂಗಡಿ ಮಂಗಳವಾರ ಸಂಜೆ ಸಿಂಧನೂರಿನ ಖಾಸಗಿ ಶಾಲೆಯಲ್ಲಿ ವೃತ್ತಿಯನ್ನು ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಅರಳಿ ಅಮರಗುಂಡಪ್ಪ ಲೇಔಟ್ ಹತ್ತಿರ ಯುವಕನೊಬ್ಬ ವಿಳಾಸ ಕೇಳುವ ನೆಪದಲ್ಲಿ ಶಿಕ್ಷಕಿಯ ಕೊರಳಲ್ಲಿದ್ದ ₹1.20 ಲಕ್ಷದ ಮೌಲ್ಯದ 2 ತೊಲೆಯ ಚಿನ್ನದ ಮಾಗಲ್ಯಸರ ಕಿತ್ತುಕೊಂಡು ಪರಾರಿಯಾದ್ದನು.</p>.<p>ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡವನ್ನು ರಚಿಸಿದ್ದರು. ವಾಸವಿ ದೇವಾಲಯದ ಬಳಿ ಬಿಟ್ಟಿದ್ದ ಬೈಕ್ ತಗೆದುಕೊಂಡು ಹೋಗಲು ಬುಧವಾರ ಕಳ್ಳನು ಬಂದಾಗ ಕಾದು ಕುಳಿತ್ತಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.</p>.<p>ಸರಗಳ್ಳನಿಂದ 2 ತೊಲೆಯ ಮಾಗಲ್ಯಸರ, ಕೃತ್ಯಕ್ಕೆ ಬಳಸಿದ ₹50ಸಾವಿರ ಮೌಲ್ಯದ ಬೈಕ್, ₹5ಸಾವಿರ ಮೌಲ್ಯದ ಮೊಬೈಲ್ನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು, ವಿಚಾರಣೆಗೊಳಪಡಿಸಿದಾಗ ಸರಗಳ್ಳ ಕನಕಗಿರಿ ತಾಲ್ಲೂಕು ಈಚನಾಳ ಗ್ರಾಮದ ಹನುಮೇಶ ಯಮನಪ್ಪ (26) ಎಂಬುದು ತಿಳಿದು ಬಂದಿದೆ.</p>.<p>24 ಗಂಟೆಯೊಳಗೆ ಪ್ರಕರಣ ಭೇದಿಸಿದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಡಾ. ರಾಮ್ ಎಲ್. ಅರಸಿದ್ದಿ ಹರ್ಷ ವ್ಯಕ್ತಪಡಿಸಿ, ಪ್ರಸಂಶೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.</p>
<p><strong>ಕಾರಟಗಿ:</strong> ಶಿಕ್ಷಕಿಯೊಬ್ಬರನ್ನು ವಿಳಾಸ ಕೇಳುವ ನೆಪದಲ್ಲಿ ಅವರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನು ಕಾರಟಗಿ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.</p>.<p>ಪಟ್ಟಣದ ಟೀಚರ್ಸ ಕಾಲೋನಿ ನಿವಾಸಿ ಗಂಗಾ ಶಿವಾನಂದ ಅಂಗಡಿ ಮಂಗಳವಾರ ಸಂಜೆ ಸಿಂಧನೂರಿನ ಖಾಸಗಿ ಶಾಲೆಯಲ್ಲಿ ವೃತ್ತಿಯನ್ನು ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಅರಳಿ ಅಮರಗುಂಡಪ್ಪ ಲೇಔಟ್ ಹತ್ತಿರ ಯುವಕನೊಬ್ಬ ವಿಳಾಸ ಕೇಳುವ ನೆಪದಲ್ಲಿ ಶಿಕ್ಷಕಿಯ ಕೊರಳಲ್ಲಿದ್ದ ₹1.20 ಲಕ್ಷದ ಮೌಲ್ಯದ 2 ತೊಲೆಯ ಚಿನ್ನದ ಮಾಗಲ್ಯಸರ ಕಿತ್ತುಕೊಂಡು ಪರಾರಿಯಾದ್ದನು.</p>.<p>ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡವನ್ನು ರಚಿಸಿದ್ದರು. ವಾಸವಿ ದೇವಾಲಯದ ಬಳಿ ಬಿಟ್ಟಿದ್ದ ಬೈಕ್ ತಗೆದುಕೊಂಡು ಹೋಗಲು ಬುಧವಾರ ಕಳ್ಳನು ಬಂದಾಗ ಕಾದು ಕುಳಿತ್ತಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.</p>.<p>ಸರಗಳ್ಳನಿಂದ 2 ತೊಲೆಯ ಮಾಗಲ್ಯಸರ, ಕೃತ್ಯಕ್ಕೆ ಬಳಸಿದ ₹50ಸಾವಿರ ಮೌಲ್ಯದ ಬೈಕ್, ₹5ಸಾವಿರ ಮೌಲ್ಯದ ಮೊಬೈಲ್ನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು, ವಿಚಾರಣೆಗೊಳಪಡಿಸಿದಾಗ ಸರಗಳ್ಳ ಕನಕಗಿರಿ ತಾಲ್ಲೂಕು ಈಚನಾಳ ಗ್ರಾಮದ ಹನುಮೇಶ ಯಮನಪ್ಪ (26) ಎಂಬುದು ತಿಳಿದು ಬಂದಿದೆ.</p>.<p>24 ಗಂಟೆಯೊಳಗೆ ಪ್ರಕರಣ ಭೇದಿಸಿದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಡಾ. ರಾಮ್ ಎಲ್. ಅರಸಿದ್ದಿ ಹರ್ಷ ವ್ಯಕ್ತಪಡಿಸಿ, ಪ್ರಸಂಶೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.</p>