<p><strong>ಕಾರಟಗಿ:</strong> ಶಿಕ್ಷಕಿಯೊಬ್ಬರನ್ನು ವಿಳಾಸ ಕೇಳುವ ನೆಪದಲ್ಲಿ ಅವರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನು ಕಾರಟಗಿ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.</p>.<p>ಪಟ್ಟಣದ ಟೀಚರ್ಸ ಕಾಲೋನಿ ನಿವಾಸಿ ಗಂಗಾ ಶಿವಾನಂದ ಅಂಗಡಿ ಮಂಗಳವಾರ ಸಂಜೆ ಸಿಂಧನೂರಿನ ಖಾಸಗಿ ಶಾಲೆಯಲ್ಲಿ ವೃತ್ತಿಯನ್ನು ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಅರಳಿ ಅಮರಗುಂಡಪ್ಪ ಲೇಔಟ್ ಹತ್ತಿರ ಯುವಕನೊಬ್ಬ ವಿಳಾಸ ಕೇಳುವ ನೆಪದಲ್ಲಿ ಶಿಕ್ಷಕಿಯ ಕೊರಳಲ್ಲಿದ್ದ ₹1.20 ಲಕ್ಷದ ಮೌಲ್ಯದ 2 ತೊಲೆಯ ಚಿನ್ನದ ಮಾಗಲ್ಯಸರ ಕಿತ್ತುಕೊಂಡು ಪರಾರಿಯಾದ್ದನು.</p>.<p>ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡವನ್ನು ರಚಿಸಿದ್ದರು. ವಾಸವಿ ದೇವಾಲಯದ ಬಳಿ ಬಿಟ್ಟಿದ್ದ ಬೈಕ್ ತಗೆದುಕೊಂಡು ಹೋಗಲು ಬುಧವಾರ ಕಳ್ಳನು ಬಂದಾಗ ಕಾದು ಕುಳಿತ್ತಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.</p>.<p>ಸರಗಳ್ಳನಿಂದ 2 ತೊಲೆಯ ಮಾಗಲ್ಯಸರ, ಕೃತ್ಯಕ್ಕೆ ಬಳಸಿದ ₹50ಸಾವಿರ ಮೌಲ್ಯದ ಬೈಕ್, ₹5ಸಾವಿರ ಮೌಲ್ಯದ ಮೊಬೈಲ್ನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು, ವಿಚಾರಣೆಗೊಳಪಡಿಸಿದಾಗ ಸರಗಳ್ಳ ಕನಕಗಿರಿ ತಾಲ್ಲೂಕು ಈಚನಾಳ ಗ್ರಾಮದ ಹನುಮೇಶ ಯಮನಪ್ಪ (26) ಎಂಬುದು ತಿಳಿದು ಬಂದಿದೆ.</p>.<p>24 ಗಂಟೆಯೊಳಗೆ ಪ್ರಕರಣ ಭೇದಿಸಿದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಡಾ. ರಾಮ್ ಎಲ್. ಅರಸಿದ್ದಿ ಹರ್ಷ ವ್ಯಕ್ತಪಡಿಸಿ, ಪ್ರಸಂಶೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ:</strong> ಶಿಕ್ಷಕಿಯೊಬ್ಬರನ್ನು ವಿಳಾಸ ಕೇಳುವ ನೆಪದಲ್ಲಿ ಅವರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನು ಕಾರಟಗಿ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.</p>.<p>ಪಟ್ಟಣದ ಟೀಚರ್ಸ ಕಾಲೋನಿ ನಿವಾಸಿ ಗಂಗಾ ಶಿವಾನಂದ ಅಂಗಡಿ ಮಂಗಳವಾರ ಸಂಜೆ ಸಿಂಧನೂರಿನ ಖಾಸಗಿ ಶಾಲೆಯಲ್ಲಿ ವೃತ್ತಿಯನ್ನು ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಅರಳಿ ಅಮರಗುಂಡಪ್ಪ ಲೇಔಟ್ ಹತ್ತಿರ ಯುವಕನೊಬ್ಬ ವಿಳಾಸ ಕೇಳುವ ನೆಪದಲ್ಲಿ ಶಿಕ್ಷಕಿಯ ಕೊರಳಲ್ಲಿದ್ದ ₹1.20 ಲಕ್ಷದ ಮೌಲ್ಯದ 2 ತೊಲೆಯ ಚಿನ್ನದ ಮಾಗಲ್ಯಸರ ಕಿತ್ತುಕೊಂಡು ಪರಾರಿಯಾದ್ದನು.</p>.<p>ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡವನ್ನು ರಚಿಸಿದ್ದರು. ವಾಸವಿ ದೇವಾಲಯದ ಬಳಿ ಬಿಟ್ಟಿದ್ದ ಬೈಕ್ ತಗೆದುಕೊಂಡು ಹೋಗಲು ಬುಧವಾರ ಕಳ್ಳನು ಬಂದಾಗ ಕಾದು ಕುಳಿತ್ತಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.</p>.<p>ಸರಗಳ್ಳನಿಂದ 2 ತೊಲೆಯ ಮಾಗಲ್ಯಸರ, ಕೃತ್ಯಕ್ಕೆ ಬಳಸಿದ ₹50ಸಾವಿರ ಮೌಲ್ಯದ ಬೈಕ್, ₹5ಸಾವಿರ ಮೌಲ್ಯದ ಮೊಬೈಲ್ನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು, ವಿಚಾರಣೆಗೊಳಪಡಿಸಿದಾಗ ಸರಗಳ್ಳ ಕನಕಗಿರಿ ತಾಲ್ಲೂಕು ಈಚನಾಳ ಗ್ರಾಮದ ಹನುಮೇಶ ಯಮನಪ್ಪ (26) ಎಂಬುದು ತಿಳಿದು ಬಂದಿದೆ.</p>.<p>24 ಗಂಟೆಯೊಳಗೆ ಪ್ರಕರಣ ಭೇದಿಸಿದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಡಾ. ರಾಮ್ ಎಲ್. ಅರಸಿದ್ದಿ ಹರ್ಷ ವ್ಯಕ್ತಪಡಿಸಿ, ಪ್ರಸಂಶೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>