<p><strong>ಕೊಪ್ಪಳ:</strong> ಬಿಸಿಯೂಟದ ಸಿಬ್ಬಂದಿಗೂ ಕೊರೊನಾ ಪರಿಹಾರ ಮತ್ತು ಆಹಾರ ಸಾಮಗ್ರಿ ಕಿಟ್ ನೀಡಬೇಕು ಎಂದು ಬಿಸಿಯೂಟ ತಯಾರಕರ ಒಕ್ಕೂಟದ (ಎಐಟಿಯುಸಿ) ವತಿಯಿಂದಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.</p>.<p>ಸರ್ಕಾರಿ ಮತ್ತುಅನುದಾನಿತ ಶಾಲೆಗಳಲ್ಲಿ ಸುಮಾರು20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರನ್ನು, ಕಡಿಮೆ ಕೂಲಿಗೆ ಅಂದರೆ ದಿನವೊಂದಕ್ಕೆ ₹85 ರಂತೆ ತಿಂಗಳಿಗೆ ₹2,600 ನೀಡಿ, ಬಡ ಮಹಿಳೆಯರನ್ನು ಜೀತದಾಳುಗಳಿಗಿಂತ ಕಡೆಯಾಗಿ ದುಡಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಒಕ್ಕೂಟದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಇತ್ತೀಚೆಗೆ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ, ದುಡಿಯುವ ವರ್ಗದ ಜನರಿಗೆ ಪ್ಯಾಕೇಜ್ ಘೋಷಣೆ ಮಾಡುವಾಗ, ಸರ್ಕಾರ ಕೊಡುವ ಬಿಡಿಗಾಸಿಗೆ, ದಿನ ಪೂರ್ತಿಯಾಗಿ ಧಗಧಗಿಸುವ ಬೆಂಕಿಯ ಒಲೆಯ ಮೇಲೆ, ಮಕ್ಕಳಿಗಾಗಿ ಬಿಸಿ–ಬಿಸಿಯಾದ ಹಾಲು, ಅಡುಗೆ ಸಿದ್ಧಪಡಿಸಿ ಉಣ ಬಡಿಸುವಅಡುಗೆಯವರಿಗೆ ಸಹಾಯ ಮಾಡದೇ ಇರುವುದು ದುರಂತ ಎಂದರು.</p>.<p>ಆದ್ದರಿಂದ ಬಿಸಿಯೂಟ ತಯಾರಕರಿಗೆ ₹10 ಸಾವಿರ ಪ್ರೋತ್ಸಾಹಧನ, ಪಡಿತರ ಕಿಟ್, ಎರಡು ತಿಂಗಳದ ವೇತನ, ₹18 ಸಾವಿರ ಕನಿಷ್ಠ ವೇತನ, ಕೊರೊನಾಕ್ಕೆ ಬಲಿಯಾದ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.</p>.<p>ಒಕ್ಕೂಟದ ಜಿಲ್ಲಾ ಸಂಚಾಲಕಿ ಸುಮಂಗಲಾ ಕೊತಬಾಳ, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ, ಮಕ್ಬೂಲ್ ರಾಯಚೂರು, ಪುಷ್ಪಾ ಮೇಸ್ತ್ರೀ, ಬಾಳಮ್ಮ ಕಟ್ಟಿಮನಿ, ಶಿವಮ್ಮ ಶಹಪುರ, ಮರ್ದಾನಬಿ ಕಾತರಕಿ ಹಾಗೂ ಖಾಜಾಬನಿ ತಾಳಿಕೋಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ಬಿಸಿಯೂಟದ ಸಿಬ್ಬಂದಿಗೂ ಕೊರೊನಾ ಪರಿಹಾರ ಮತ್ತು ಆಹಾರ ಸಾಮಗ್ರಿ ಕಿಟ್ ನೀಡಬೇಕು ಎಂದು ಬಿಸಿಯೂಟ ತಯಾರಕರ ಒಕ್ಕೂಟದ (ಎಐಟಿಯುಸಿ) ವತಿಯಿಂದಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.</p>.<p>ಸರ್ಕಾರಿ ಮತ್ತುಅನುದಾನಿತ ಶಾಲೆಗಳಲ್ಲಿ ಸುಮಾರು20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರನ್ನು, ಕಡಿಮೆ ಕೂಲಿಗೆ ಅಂದರೆ ದಿನವೊಂದಕ್ಕೆ ₹85 ರಂತೆ ತಿಂಗಳಿಗೆ ₹2,600 ನೀಡಿ, ಬಡ ಮಹಿಳೆಯರನ್ನು ಜೀತದಾಳುಗಳಿಗಿಂತ ಕಡೆಯಾಗಿ ದುಡಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಒಕ್ಕೂಟದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಇತ್ತೀಚೆಗೆ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ, ದುಡಿಯುವ ವರ್ಗದ ಜನರಿಗೆ ಪ್ಯಾಕೇಜ್ ಘೋಷಣೆ ಮಾಡುವಾಗ, ಸರ್ಕಾರ ಕೊಡುವ ಬಿಡಿಗಾಸಿಗೆ, ದಿನ ಪೂರ್ತಿಯಾಗಿ ಧಗಧಗಿಸುವ ಬೆಂಕಿಯ ಒಲೆಯ ಮೇಲೆ, ಮಕ್ಕಳಿಗಾಗಿ ಬಿಸಿ–ಬಿಸಿಯಾದ ಹಾಲು, ಅಡುಗೆ ಸಿದ್ಧಪಡಿಸಿ ಉಣ ಬಡಿಸುವಅಡುಗೆಯವರಿಗೆ ಸಹಾಯ ಮಾಡದೇ ಇರುವುದು ದುರಂತ ಎಂದರು.</p>.<p>ಆದ್ದರಿಂದ ಬಿಸಿಯೂಟ ತಯಾರಕರಿಗೆ ₹10 ಸಾವಿರ ಪ್ರೋತ್ಸಾಹಧನ, ಪಡಿತರ ಕಿಟ್, ಎರಡು ತಿಂಗಳದ ವೇತನ, ₹18 ಸಾವಿರ ಕನಿಷ್ಠ ವೇತನ, ಕೊರೊನಾಕ್ಕೆ ಬಲಿಯಾದ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.</p>.<p>ಒಕ್ಕೂಟದ ಜಿಲ್ಲಾ ಸಂಚಾಲಕಿ ಸುಮಂಗಲಾ ಕೊತಬಾಳ, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ, ಮಕ್ಬೂಲ್ ರಾಯಚೂರು, ಪುಷ್ಪಾ ಮೇಸ್ತ್ರೀ, ಬಾಳಮ್ಮ ಕಟ್ಟಿಮನಿ, ಶಿವಮ್ಮ ಶಹಪುರ, ಮರ್ದಾನಬಿ ಕಾತರಕಿ ಹಾಗೂ ಖಾಜಾಬನಿ ತಾಳಿಕೋಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>