ಶನಿವಾರ, 2 ಆಗಸ್ಟ್ 2025
×
ADVERTISEMENT
ADVERTISEMENT

ಕೊಪ್ಪಳದಲ್ಲಿ ವಿಮಾನ ನಿಲ್ದಾಣ: ಗಗನಕುಸುಮವಾದ ಗಗನಯಾನ

Published : 21 ಜುಲೈ 2025, 7:11 IST
Last Updated : 21 ಜುಲೈ 2025, 7:11 IST
ಫಾಲೋ ಮಾಡಿ
Comments
ರಾಜಶೇಖರ ಹಿಟ್ನಾಳ
ರಾಜಶೇಖರ ಹಿಟ್ನಾಳ
ಉಡಾನ್‌ ಯೋಜನೆಯಡಿ ಮೂರು ವರ್ಷಗಳ ತನಕ ಮಾತ್ರ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ. ಆದ್ದರಿಂದ ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಆರಂಭ ವಿಳಂಬವಾಗುತ್ತಿದೆ. ಸಬ್ಸಿಡಿ ಹತ್ತು ವರ್ಷಕ್ಕೆ ಏರಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ
ರಾಜಶೇಖರ ಹಿಟ್ನಾಳ ಸಂಸದ 
ವಿಮಾನ ನಿಲ್ದಾಣಕ್ಕೆ ಜಿಲ್ಲೆಯಲ್ಲಿ ಜಾಗ ಅಂತಿಮಗೊಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತ್ವರಿತವಾಗಿ ಕಾಮಗಾರಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಕೇಂದ್ರಕ್ಕೆ ಈ ಕುರಿತು ಪತ್ರ ಬರೆಯುವೆ  
ಅಶೋಕಸ್ವಾಮಿ ಹೇರೂರು ಅಧ್ಯಕ್ಷ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ
ವಿಮಾನ ಸೇವೆ ಎಷ್ಟು ಬೇಗ ಆರಂಭವಾಗುತ್ತದೆ ಅಷ್ಟು ವೇಗವಾಗಿ ವಾಣಿಜ್ಯ ವಹಿವಾಟು ಹಾಗೂ ಜಿಲ್ಲೆಯ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ವಿಮಾನ ನಿಲ್ದಾಣ ಆರಂಭಕ್ಕೆ ತ್ವರಿತ ಕ್ರಮವಾಗಬೇಕು
ಶ್ರೀನಿವಾಸ ಗುಪ್ತಾ ಕೂದಲೋದ್ಯಮಿ
ಉಡಾನ್‌ ಯೋಜನೆ ಹತ್ತು ವರ್ಷ ವಿಸ್ತರಣೆ
ದೇಶದ ಸಾಮಾನ್ಯ ನಾಗರಿಕನೂ ವಿಮಾನಯಾನ ಮಾಡಲಿ ಎನ್ನುವ ಮಹಾತ್ವಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಉಡಾನ್‌ ಯೋಜನೆಯನ್ನು ಪರಿಷ್ಕರಣೆ ಮಾಡಿದ್ದು ಮುಂದಿನ ಹತ್ತು ವರ್ಷಗಳಿಗೆ ವಿಸ್ತರಣೆ ಮಾಡಿದೆ. 20 ಹೊಸ ಪ್ರದೇಶಗಳಿಗೆ ವಾಯುಯಾನ ಆರಂಭವಿಸುವ ಗುರಿ ಹೊಂದಿದೆ. ಆದರೆ ಈ ಯೋಜನೆಗೆ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ. 32ರಷ್ಟು ಕಡಿಮೆಯಾಗಿದೆ. ₹540 ಕೋಟಿಯನ್ನು ಈ ಯೋಜನೆಗೆ ಮೀಸಲಿಡಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ₹800 ಕೋಟಿ ನೀಡಲಾಗಿತ್ತು. ಉಡಾನ್‌ನಿಂದ ಪ್ರಾದೇಶಿಕ ವಿಮಾನಯಾನ ಸಂಸ್ಥೆಗಳ ಹುಟ್ಟು ಮತ್ತು ಬೆಳವಣಿಗೆಗೆ ಸಾಧ್ಯವಾಗುತ್ತದೆ. ಕ್ರಮೇಣವಾಗಿ ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮದ ಪ್ರಗತಿಗೆ ಕಾರಣವಾಗುತ್ತದೆ ಎನ್ನುವುದು ಕೇಂದ್ರದ ಉದ್ದೇಶವಾಗಿದೆ. ಈ ಯೋಜನೆಯಡಿ ಪ್ರಸ್ತುತ ದೇಶದಲ್ಲಿ 90 ವಿಮಾನ ನಿಲ್ದಾಣಗಳು 625 ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಡಾನ್‌ ಯೋಜನೆ 2016ರಲ್ಲಿ ಆರಂಭವಾಗಿತ್ತು.
ಕಾಮಗಾರಿ ಆರಂಭಕ್ಕೆ ವಿಳಂಬ: ಕಾರಣವೇನು?
ಉಡಾನ್‌ ಯೋಜನೆಯಡಿ ವಿಮಾನಯಾನ ಆರಂಭವಾದರೆ ಕೇಂದ್ರ ಸರ್ಕಾರದಿಂದ ವಿಮಾನ ಪ್ರಯಾಣ ದರಕ್ಕೆ ಸಬ್ಸಿಡಿ ನೀಡಲು ಕಾರ್ಯಸಾಧ್ಯತಾ ಅಂತರ ನಿಧಿ ಟಿಕೆಟ್‌ಗಳ ಮೇಲಿನ ಸೇವಾ ತೆರಿಗೆಯಲ್ಲಿ ರಿಯಾಯಿತಿ ಉಡಾನ್-ಆರ್‌ಸಿಎಸ್ ವಿಮಾನಗಳ ಕೋಡ್ ಹಂಚಿಕೆಗೆ ಅವಕಾಶ ರಾಜ್ಯ ಸರ್ಕಾರದಿಂದ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಉಚಿತ ಭೂಮಿ ಒದಗಿಸುವುದು ನೀರು ವಿದ್ಯುತ್ ಮತ್ತು ಇತರ ಉಪಯುಕ್ತತೆಗಳನ್ನು ಕಡಿಮೆ ದರದಲ್ಲಿ ನೀಡುವುದು ಲ್ಯಾಂಡಿಂಗ್ ಪಾರ್ಕಿಂಗ್ ಅಥವಾ ಇತರ ಶುಲ್ಕಗಳ ವಿನಾಯಿತಿ ಟರ್ಮಿನಲ್ ನ್ಯಾವಿಗೇಷನ್ ಲ್ಯಾಂಡಿಂಗ್ ಶುಲ್ಕ ವಿನಾಯಿತಿ ಹೀಗೆ ಅನೇಕ ಸೌಲಭ್ಯಗಳು ಸಿಗುತ್ತವೆ. ಪ್ರಸ್ತುತ ನಿಯಮಗಳ ಪ್ರಕಾರ ಉಡಾನ್‌ ಯೋಜನೆಗೆ ಕೇಂದ್ರದಿಂದ ಈ ಸೌಲಭ್ಯಗಳು ಮೂರು ವರ್ಷಗಳಿಗೆ ಮಾತ್ರ ಸೀಮಿತವಾಗಿವೆ. ಮೂರು ವರ್ಷ ಅವಧಿ ಮುಗಿದ ಬಳಿಕ ವಿಮಾನಯಾನ ಕಂಪನಿಗಳು ವಾಪಸ್‌ ಹೋದರೆ ನಿಲ್ದಾಣ ಇದ್ದೂ ಇಲ್ಲದಂತಾಗುತ್ತದೆ. ಆದ್ದರಿಂದ ಮೂರನೇ ದರ್ಜೆಯ ನಗರಗಳಲ್ಲಿ ಉಡಾನ್‌ ಯಶಸ್ವಿಯಾಗಲು ಸೌಲಭ್ಯಗಳ ಮೂರು ವರ್ಷದ ಗರಿಷ್ಠ ಮಿತಿಯನ್ನು ತೆಗೆದು ಹಾಕಬೇಕಿದೆ ಎನ್ನುತ್ತಾರೆ ಇಲ್ಲಿನ ಹೋರಾಟಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT