ಎಂ. ಭೀಮರಾವ್ ಕುಲಕರ್ಣಿ ಮಾತನಾಡಿ,‘ಕುಂಟೋಜಿಯ ದಾಸರು ವಿಜಯದಾಸರು, ಗೋಪಾಲ ದಾಸರು ಹಾಗೂ ಜಗನ್ನಾಥ ದಾಸರ ಸಮಕಾಲೀನವರಾಗಿದ್ದು, ಸುಳಾದಿ, ಉಗಾಭೋಗಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ರಚಿಸಿದ್ದಾರೆ’ ಎಂದು ತಿಳಿಸಿದರು. ಕುಂಟೋಜಿ ದಾಸರ ವಂಶಸ್ಥರಾದ ಕೆ.ಚ್ ಕುಲಕರ್ಣಿ, ಕನಕಾಚಲ ಚಾರಣಿ, ಪ್ರತಿಷ್ಠಾನ ಪದಾಧಿಕಾರಿಗಳಾದ ವೆಂಕಟೇಶ ಕುಲಕರ್ಣಿ, ಭೀಮಸೇನ ಜೋಶಿ, ಭೀಮಸೇನ ಹಾಗೂ ಗೋಪಾಲ ಕೃಷ್ಣ ಕುಲಕರ್ಣಿ ಅವರು ಇದ್ದರು.