ಜಪಾನ್ದಲ್ಲಿ ನಡೆದ ಜಂಪ್ರೋಪ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದಿದ್ದೇವೆ ರಾಷ್ಟ್ರೀಯ ಸ್ಪರ್ಧೆಗೆ ತಯಾರಿ ನಡೆಸಬೇಕೆಂದರೆ ಅವಕಾಶ ನಿರಾಕರಿಸಲಾಗುತ್ತಿದೆ.
ಮಂಜುನಾಥ್ ಚೌಡ್ಕಿ ಜಂಪ್ರೋಪ್ ಕ್ರೀಡಾಪಟು
ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರನ್ನು ಶಿಫಾರಸು ಮಾಡುವಂತೆ ಬರೆದ ಪತ್ರಕ್ಕೆ ಎಂಟು ತಿಂಗಳಾದರೂ ಶಾಲಾ ಶಿಕ್ಷಣ ಇಲಾಖೆ ಸ್ಪಂದಿಸಿಲ್ಲ ಯಾವ ಕಾರಣಕ್ಕೆ ಹಿಂದೇಟು ಹಾಕುತ್ತಿದ್ದಾರೆಂಬುದು ತಿಳಿದಿಲ್ಲ.
ವಿಠ್ಠಲ ಜಾಬಗೌಡರ ಸಹಾಯಕ ನಿರ್ದೇಶಕ ಯುವ ಸಬಲೀಕರಣ ಇಲಾಖೆ
ಯುವ ಸಬಲೀಕರಣ ಕ್ರೀಡಾ ಅಧಿಕಾರಿ ಹುದ್ದೆ ಬೇಡ ಎಂದು ಪತ್ರ ಬರೆದಿದ್ದೇನೆ ಅಲ್ಲದೆ ರಾಷ್ಟ್ರೀಯ ಹಬ್ಬದ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ನಮಗೂ ಅಡೆತಡೆಯೂ ಆಗುತ್ತಿದ್ದು ಕ್ರೀಡಾ ಇಲಾಖೆ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.