ಇದ್ದ ವ್ಯವಸ್ಥೆಯಲ್ಲಿಯೇ ನಮ್ಮ ಜವಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ. ಜನಪ್ರತಿನಿಧಿಗಳು ನಮಗೆ ಸಮಸ್ಯೆಗಳಿಗೆ ಸ್ಪಂದಿಸಿದರೆ ಮತ್ತಷ್ಟುಟು ಉತ್ಸಾಹದಿಂದ ಕೆಲಸ ಮಾಡಿ ಉತ್ತಮ ಸಾಧನೆ ಮಾಡಬಹುದು
ಅನೀಲಕುಮಾರ ಪ್ರಾಚಾರ್ಯ ಕೆಪಿಎಸ್ ಕಾರಟಗಿ
ಜನಪ್ರತಿನಿಧಿಗಳು ಸಮುದಾಯ ನಮಗೆ ಇನ್ನಷ್ಟು ಸಹಕಾರ ಪ್ರೋತ್ಸಾಹ ನೀಡಿದರೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುವುದು
ಶರಣಪ್ಪ ಬನ್ನೋರ ಪ್ರಭಾರ ಪ್ರಾಚಾರ್ಯ ಪಿಯು ಕಾಲೇಜು ಸಿದ್ದಾಪುರ
‘ಶಕ್ತಿ’ಗೆ ವಿದ್ಯಾರ್ಥಿಗಳ ‘ಶಾಪ’
ನಿತ್ಯ ಬಸ್ನಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಶಕ್ತಿ ಯೋಜನೆ (ಮಹಿಳೆಯರ ಉಚಿತ ಪ್ರಯಾಣ) ಬಗ್ಗೆ ತೀವ್ರ ಆಕ್ರೋಶ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆ ಆರಂಭದಿಂದಲೂ ವಿದ್ಯಾರ್ಥಿಗಳ ಪಾಲಿಗೆ ಮರಣ ಶಾಸನವಾಗಿದೆ. ಬಸ್ ನಿಲ್ದಾಣದ ಬಳಿ ಬಸ್ ನಿಲ್ಲದೆ ಹೋಗುವುದರಿಂದ ಶಿಕ್ಷಣದ ಬಗ್ಗೆ ನಿರಾಸೆ ಮೂಡಿಸಿದೆ. ಕಾದು ಕಾದು ಕೊನೆಗೆ ಕಾಲೇಜಿಗೆ ಹೋದರೆ ಅಲ್ಲೂ ಸಮಸ್ಯೆಗಳೇ ತಾಂಡವವಾಡುತ್ತಿವೆ. ‘ರಾಜಕೀಯ ಲಾಭಕ್ಕಾಗಿ ಗ್ಯಾರಂಟಿ ಯೋಜನೆಗಳ ಬದಲು ಅದೇ ಹಣವನ್ನು ಶಿಕ್ಷಣ ಆರೋಗ್ಯ ಬೆಲೆ ಕಡಿತಕ್ಕೆ ವಿನಿಯೋಗಿಸಿದ್ದರೆ ಈ ಸರ್ಕಾರ ಬಂದದ್ದಕ್ಕೂ ಸಾರ್ಥಕವಾಗುತ್ತಿತ್ತು. ಒಂದೆಡೆ ವಿವಿಧ ಬೆಲೆ ಏರಿಕೆ ಮಾಡಿ ಇರುವ ಹಣದ ದುರುಪಯೋಗ ಮಾಡಿ ಗ್ಯಾರಂಟಿ ಮುಂದುವರೆಸುತ್ತಿರುವುದು ಏಕೆ?’ ಎನ್ನುವುದು ವಿದ್ಯಾರ್ಥಿಗಳ ಮಾತು.