ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಕುಷ್ಟಗಿ: ಕೃಷ್ಣೆ ಉಕ್ಕಿದರೂ ಕೆರೆಗಳಿಗಿಲ್ಲ ‘ಜಲಭಾಗ್ಯ’

ಭಣಗುಡುತ್ತಿರುವ ಕುಷ್ಟಗಿ, ಯಲಬುರ್ಗಾ, ಕನಕಗಿರಿ ತಾಲ್ಲೂಕಿನ ಕೆರೆಗಳು
Published : 25 ಜುಲೈ 2024, 6:13 IST
Last Updated : 25 ಜುಲೈ 2024, 6:13 IST
ಫಾಲೋ ಮಾಡಿ
Comments
ಕೆಲಸ ಪೂರ್ಣಗೊಳಿಸುವಂತೆ ಪದೇಪದೇ ಹೇಳಿದ್ದೇವೆ ಆದರೆ ಗುತ್ತಿಗೆದಾರ ಯಾರ ಮಾತು ಕೇಳುವ ಸ್ಥಿತಿಯಲ್ಲಿಲ್ಲ.
ಅಮರೇಗೌಡ ಪಾಟೀಲ ಎಇಇ ಇಳಕಲ್‌ ಉಪ ವಿಭಾಗ
ರೈತರಿಗೆ ಪರಿಹಾರ ದೊರಕದ ಕಾರಣ ಪಂಪ್‌ಹೌಸ್‌ಗೆ ಕೀಲಿಹಾಕಿದ್ದಾರೆ. ಈ ವಿಷಯವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಬಳಿ ಪ್ರಸ್ತಾಪಿಸಿದ್ದೇನೆ. ಶೀಘ್ರ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ದೊಡ್ಡನಗೌಡ ಪಾಟೀಲ ಶಾಸಕ
ನದಿಯಲ್ಲಿ ಸಾಕಷ್ಟು ನೀರಿದೆ ನಮ್ಮಲ್ಲಿ ಮಳೆಯೇ ಇಲ್ಲದ ಕಾರಣ ನಮ್ಮ ಕೆರೆಗಳಲ್ಲಿ ಹನಿ ನೀರಿಲ್ಲ ಕೆರೆ ತುಂಬಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ
ಹನುಮಗೌಡ ಪಾಟೀಲ ಮುದೂಟಗಿ ರೈತ
ಕೆಲಸಕ್ಕೆ ಅಡ್ಡಿ, ಪಂಪ್‌ಹೌಸ್‌ಗೆ ಕೀಲಿ
ಮುದುಟಗಿ ಬಳಿ ಡೆಲೆವರಿ ಚೇಂಬರ್‌ಗೆ ಇಳಕಲ್‌ ತಾಲ್ಲೂಕಿನಲ್ಲಿರುವ ಜಾಕ್‌ವೆಲ್‌ದಿಂದ ಕುಷ್ಟಗಿ ತಾಲ್ಲೂಕಿನ ಮುದುಟಗಿ ಕಲಾಲಬಂಡಿ ಡೆಲೆವರಿ ಚೇಂಬರ್‌ವಾರ್‌ಗೆ ನೀರು ತಲುಪುತ್ತದೆ. ಮುಂದೆ ಯಲಬುರ್ಗಾ ಮತ್ತು ಕನಕಗಿರಿ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಆದರೆ ಮುದುಟಗಿ ಕಲಾಲಬಂಡಿ ನಡುವಿನ ಮುಖ್ಯ ಕೊಳವೆಯಲ್ಲಿ 7-8 ಬಾರಿ ಸೋರಿಕೆಯಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ರೈತರ ಜಮೀನಿನ ಮೇಲ್ಮಣ್ಣು ಸಂಪೂರ್ಣ ಕೊಚ್ಚಿಹೋಗಿತ್ತು. ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರೇ ಈ ತಾಂತ್ರಿಕ ದೋಷಕ್ಕೆ ಜವಾಬ್ದಾರರಾಗಿದ್ದು ಅವರೇ ರೈತರಿಗೆ ಪರಿಹಾರ ನೀಡಬೇಕಿದೆ. ಆದರೆ ಪರಿಹಾರ ನೀಡುವವರೆಗೂ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದೆ ರೈತರು ಪಟ್ಟು ಹಿಡಿದಿದ್ದಾರೆ ಎಂದು ನಿಗಮದ ಮೂಲಗಳು ತಿಳಿಸಿವೆ. ಅದೇ ರೀತಿ ಯೋಜನೆಯ ಕೊಳವೆ ಜೋಡಣೆಗೆ ಜಮೀನು ನೀಡಿದ ರೈತರಿಗೂ ಇನ್ನೂ ಪರಿಹಾರ ದೊರಕದ ಕಾರಣ ಮುದುಟಗಿ ಡೆಲೆವರಿ ಚೇಂಬರ್‌ನ ಪಂಪ್‌ಹೌಸ್‌ಗೆ ರೈತರು ಕೀಲಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT