ಕುಷ್ಟಗಿ (ಕೊಪ್ಪಳ): ತಾಲ್ಲೂಕಿನ ಮದಲಗಟ್ಟಿ ಗ್ರಾಮದ ಬಳಿ ಗಜೇಂದ್ರಗಡ ರಸ್ತೆಯಲ್ಲಿ ಶನಿವಾರ ಲಾರಿ ಹರಿದು ಕುರಿಗಾಹಿಯೊಬ್ಬರು ಮೃತಪಟ್ಟಿದ್ದಾರೆ.18 ಕುರಿಗಳು ಸ್ಥಳದಲ್ಲೇ ಅಸು ನೀಗಿವೆ.
ಮೃತ ವ್ಯಕ್ತಿ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕು ಅಪ್ಪುಗೋಳ ಗ್ರಾಮದ ಸಿದ್ದಪ್ಪ ಅಪ್ಪಣ್ಣ ಹೆಗಡೆ (38) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ವಾಹನ ಸಮೇತ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.