<p><strong>ಮುನಿರಾಬಾದ್</strong>: ಸಮೀಪದ ಶಿವಪುರ ಬಳಿಯ ತುಂಗಭದ್ರಾ ತೀರದ ನಗರಗಡ್ಡಿ ಮಠದಲ್ಲಿ ಬುಧವಾರ ಮಕರ ಸಂಕ್ರಮಣದ ಅಂಗವಾಗಿ ಹಲವು ಭಕ್ತರು ತುಂಗಭದ್ರೆಯಲ್ಲಿ ಪುಣ್ಯಸ್ನಾನ ಮಾಡಿ ದಾಸೋಹ ಕಾರ್ಯಕ್ರಮದಲ್ಲಿ ಊಟ ಮಾಡಿದರು.</p>.<p>ಉತ್ತರಾಯಣ ಪುಣ್ಯಕಾಲ ಶುಭ ಸಂದರ್ಭ ಎಂದು ನಂಬಲಾಗಿರುವ ಮಕರ ಸಂಕ್ರಮಣ ಅಂಗವಾಗಿ ನೂರಾರು ಭಕ್ತರು ನಗರಗಡ್ಡಿ ಮಠಕ್ಕೆ ಬಂದು ನದಿಯಲ್ಲಿ ಸ್ನಾನ ಮಾಡಿದರು. ಬಳಿಕ ಮಠದ ವತಿಯಿಂದ ಏರ್ಪಡಿಸಲಾಗಿದ್ದ ದಾಸೋಹದಲ್ಲಿ ಊಟ ಮಾಡಿದರು.</p>.<p>ಇದಕ್ಕೂ ಮುನ್ನ ಶಾಂತಲಿಂಗೇಶ್ವರ ಕರ್ತೃಗದ್ದುಗೆಗೆ ಪೂಜೆ ಸಲ್ಲಿಸಿ, ಶಾಂತಲಿಂಗೇಶ್ವರ ಸ್ವಾಮೀಜಿ, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹಾಗೂ ಮೈನಳ್ಳಿ ಮಠದ ಸಿದ್ದೇಶ್ವರ ಶಿವಾಚಾರ್ಯರ ಆಶೀರ್ವಾದ ಪಡೆದರು.</p>.<p>ತರಹೇವಾರಿ ಊಟ: ಗೋದಿ ಪಾಯಸ, ಜೋಳದ ರೊಟ್ಟಿ, ಚಪಾತಿ, ಕಾಳಿನ ಪಲ್ಯ, ಬದನೆಕಾಯಿ, ಅನ್ನ-ಸಾಂಬಾರ ಊಟ ಸವಿದರು. </p>.<p>ವಿದ್ಯಾರ್ಥಿಗಳ ಸೇವೆ: ಹಿಟ್ನಾಳ ಗ್ರಾಮದ ಎಸ್ಆರ್ಎಸ್ಎಂ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಅಡುಗೆ ಮಾಡುವ ಮತ್ತು ಭಕ್ತರಿಗೆ ಉಣಬಡಿಸುವ ಕೆಲಸದಲ್ಲಿ ಸಹಾಯ ಹಸ್ತ ಚಾಚುತ್ತಾರೆ.</p>.<p>ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಪ್ಪ ಅರಿಕೇರಿ, ನಿವೃತ್ತ ಮುಖ್ಯ ಶಿಕ್ಷಕ ಜೆ. ಕೃಷ್ಣಮೂರ್ತಿ ಸೇರಿದಂತೆ 32 ವಿದ್ಯಾರ್ಥಿಗಳು ಸೇವೆ ಮಾಡಿದರು. ಬಂಡಿಹರ್ಲಾಪುರ, ಶಿವಪುರ, ಅಗಳಕೇರಾ, ಹುಲಿಗಿ, ಶಹಾಪುರ ಬೇವಿನಹಳ್ಳಿ, ಹಿಟ್ನಾಳ, ಹುಲಿಗಿ ಸೇರಿದಂತೆ ವಿವಿಧ ಗ್ರಾಮಸ್ಥರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನಿರಾಬಾದ್</strong>: ಸಮೀಪದ ಶಿವಪುರ ಬಳಿಯ ತುಂಗಭದ್ರಾ ತೀರದ ನಗರಗಡ್ಡಿ ಮಠದಲ್ಲಿ ಬುಧವಾರ ಮಕರ ಸಂಕ್ರಮಣದ ಅಂಗವಾಗಿ ಹಲವು ಭಕ್ತರು ತುಂಗಭದ್ರೆಯಲ್ಲಿ ಪುಣ್ಯಸ್ನಾನ ಮಾಡಿ ದಾಸೋಹ ಕಾರ್ಯಕ್ರಮದಲ್ಲಿ ಊಟ ಮಾಡಿದರು.</p>.<p>ಉತ್ತರಾಯಣ ಪುಣ್ಯಕಾಲ ಶುಭ ಸಂದರ್ಭ ಎಂದು ನಂಬಲಾಗಿರುವ ಮಕರ ಸಂಕ್ರಮಣ ಅಂಗವಾಗಿ ನೂರಾರು ಭಕ್ತರು ನಗರಗಡ್ಡಿ ಮಠಕ್ಕೆ ಬಂದು ನದಿಯಲ್ಲಿ ಸ್ನಾನ ಮಾಡಿದರು. ಬಳಿಕ ಮಠದ ವತಿಯಿಂದ ಏರ್ಪಡಿಸಲಾಗಿದ್ದ ದಾಸೋಹದಲ್ಲಿ ಊಟ ಮಾಡಿದರು.</p>.<p>ಇದಕ್ಕೂ ಮುನ್ನ ಶಾಂತಲಿಂಗೇಶ್ವರ ಕರ್ತೃಗದ್ದುಗೆಗೆ ಪೂಜೆ ಸಲ್ಲಿಸಿ, ಶಾಂತಲಿಂಗೇಶ್ವರ ಸ್ವಾಮೀಜಿ, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹಾಗೂ ಮೈನಳ್ಳಿ ಮಠದ ಸಿದ್ದೇಶ್ವರ ಶಿವಾಚಾರ್ಯರ ಆಶೀರ್ವಾದ ಪಡೆದರು.</p>.<p>ತರಹೇವಾರಿ ಊಟ: ಗೋದಿ ಪಾಯಸ, ಜೋಳದ ರೊಟ್ಟಿ, ಚಪಾತಿ, ಕಾಳಿನ ಪಲ್ಯ, ಬದನೆಕಾಯಿ, ಅನ್ನ-ಸಾಂಬಾರ ಊಟ ಸವಿದರು. </p>.<p>ವಿದ್ಯಾರ್ಥಿಗಳ ಸೇವೆ: ಹಿಟ್ನಾಳ ಗ್ರಾಮದ ಎಸ್ಆರ್ಎಸ್ಎಂ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಅಡುಗೆ ಮಾಡುವ ಮತ್ತು ಭಕ್ತರಿಗೆ ಉಣಬಡಿಸುವ ಕೆಲಸದಲ್ಲಿ ಸಹಾಯ ಹಸ್ತ ಚಾಚುತ್ತಾರೆ.</p>.<p>ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಪ್ಪ ಅರಿಕೇರಿ, ನಿವೃತ್ತ ಮುಖ್ಯ ಶಿಕ್ಷಕ ಜೆ. ಕೃಷ್ಣಮೂರ್ತಿ ಸೇರಿದಂತೆ 32 ವಿದ್ಯಾರ್ಥಿಗಳು ಸೇವೆ ಮಾಡಿದರು. ಬಂಡಿಹರ್ಲಾಪುರ, ಶಿವಪುರ, ಅಗಳಕೇರಾ, ಹುಲಿಗಿ, ಶಹಾಪುರ ಬೇವಿನಹಳ್ಳಿ, ಹಿಟ್ನಾಳ, ಹುಲಿಗಿ ಸೇರಿದಂತೆ ವಿವಿಧ ಗ್ರಾಮಸ್ಥರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>