ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡೆತ್ತುಗಳ ಮೂರ್ತಿಗಳಿಗೆ ಬೇಡಿಕೆ

Last Updated 2 ಜುಲೈ 2019, 4:50 IST
ಅಕ್ಷರ ಗಾತ್ರ

ಯಲಬುರ್ಗಾ: ಗ್ರಾಮೀಣ ಭಾಗದ ಜನರ ಸಂಭ್ರಮದ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ.

ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಮೂಲಕ ಭೂತಾಯಿಗೆ ಮೊದಲ ಗೌರವ ಸಲ್ಲಿಸಲಾಗುತ್ತದೆ.

ಈ ಹಬ್ಬಕ್ಕೆ ಸ್ಥಳೀಯ ಕುಂಬಾರ ಹಾಗೂ ಬಡಿಗೇರ ಕುಟುಂಬಗಳು ಮಣ್ಣಿನಿಂದ ಎತ್ತುಗಳನ್ನು ತಯಾರಿಸುತ್ತವೆ.

ಕಲಾವಿದ ವಿರೂಪಾಕ್ಷಪ್ಪ ಬಡಿಗೇರ ಮಣ್ಣೆತ್ತಿನ ಮೂರ್ತಿಗಳನ್ನು ತಯಾರಿಸಿದ್ದು, ಜೋಡಿ ಎತ್ತುಗಳಿಗೆ ₹20ರಿಂದ 40 ಗೆ ಮಾರಾಟ ಮಾಡಲಾಗುತ್ತದೆ.

ಹಬ್ಬದ ಒಂದು ತಿಂಗಳ ಮುಂಚಿತವಾಗಿಯೇ ಮಣ್ಣನ್ನು ತಂದು ತಯಾರಿಸಿಟ್ಟುಕೊಳ್ಳುವ ಇವರು ಕಳೆದ 20 ವರ್ಷಗಳಿಂದಲೂ ಈ ಕಾಯಕದಲ್ಲಿ ನಿರತರಾಗಿದ್ದಾರೆ.

ನಿರೀಕ್ಷಿಸಿದಷ್ಟು ಲಾಭ ಸಿಗದಿದ್ದರೂ ಪೂರ್ವಜರ ಕಾಲದಿಂದಲೂ ಮಾಡಿಕೊಂಡು ಬಂದಿರುವ ಕಲೆ ಮತ್ತು ಕಸುಬು ಕೈಬಿಡಬಾರದೆಂದು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ವಿರೂಪಾಕ್ಷಪ್ಪ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT