ಬೆಳಿಗ್ಗೆ ದೇವಸ್ಥಾನದಲ್ಲಿ ಕುಂಭಮೇಳ, ಮಾರುತೇಶ್ವರ ದೇವರಿಗೆ ಅಭಿಷೇಕ ಗಣಾರಾಧನೆ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆದವು. ಸಂಜೆ ಶರಣಬಸವೇಶ್ವರರ ಉಚ್ಛಾಯ ವಿಜೃಂಭಣೆಯಿಂದ ನಡೆಯಿತು. ಡೊಳ್ಳು, ಭಜನೆ, ವಿವಿಧ ವಾದ್ಯಗಳು ಗಮನ ಕಳೆ ತಂದವು. ಸೂಳೇಕಲ್, ಕನಕಗಿರಿ, ಬೆನಕನಾಳ, ಕಲಕೇರಿ ಸೇರಿದಂತೆ ಸುತ್ತಮುತ್ತಲ್ಲಿನ ಗ್ರಾಮಸ್ಥರು ಭಾಗವಹಿಸಿದ್ದರು.