ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಲೂರು: ಸಂಘಟನಾ ಸಭೆ

Last Updated 2 ಜನವರಿ 2022, 3:18 IST
ಅಕ್ಷರ ಗಾತ್ರ

ಅಳವಂಡಿ:ಸಮೀಪದ ಕವಲೂರು ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಮೃತ ರೈತ ಉತ್ಪಾದಕರ ಸಂಘದ ಸಂಘಟನಾ ಸಭೆ ಹಾಗೂ ಸಹರಾ ಸಂಸ್ಥೆಯ ಗ್ರಾಮ ಮಟ್ಟದ ಸಂಘ ರಚನೆ ಕುರಿತು ಮಾಹಿತಿ ಸಭೆ ನಡೆಯಿತು.

ಜಿಲ್ಲಾ ಸಂಯೋಜಕ ಅಲ್ಲಾಗಿರಿರಾಜ ಕನಕಗಿರಿ ಮಾತನಾಡಿ,‘ರೈತ ಸಂಘ ರಚಿಸಿ, ರೈತರು ಬೆಳೆದ ಬೆಳಗಳಿಗೆ ಮಾರುಕಟ್ಟೆ ವ್ಯವಸ್ಥೆ, ಗೊಬ್ಬರ, ಬೀಜ ಮಾರಾಟ, ಬೆಂಬಲ ಬೆಲೆ ಒದಗಿಸುವುದು ಹಾಗೂ ರೈತರಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಲಾಗುವುದು. ಸದಸ್ಯತ್ವ ಪಡೆದುಕೊಳ್ಳಬೇಕು’ ಎಂದು ಅವರು ಹೇಳಿದರು.

ಪಿಡಿಒ ಶಂಕ್ರಮ್ಮ, ಸಂಪನ್ಮೂಲ ವ್ಯಕ್ತಿ ಎನ್.ಎಸ್‌.ತಾವರಗೇರಾ, ಎಎಒ ವೀರೇಶ, ಆತ್ಮ ಯೋಜನೆಯ ತಾರಾ, ಕುಶಾಲ್ ರಾಜಾಪುರೋಹಿತ, ರೈತರಾದ ಶರಣಪ್ಪ ಯರಾಶಿ, ಹನುಮಂತ ಭೋವಿ, ಮಲ್ಲಣ್ಣ ಯರಾಶಿ, ಪರಮೇಶಪ್ಪ ಶಿಳ್ಳಿನ, ಚಂದ್ರ ಯರಾಶಿ, ಸಂಗಪ್ಪ ಹಾಗೂ ದೇವರಾಜ ಅಂಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT