ನಂತರ ಉದ್ಯಮಿ ಎನ್.ಆರ್.ಶ್ರೀನಿವಾಸರಾವ್ ಮಾತನಾಡಿ,‘ಗಂಗಾವತಿ ಉದ್ಯಮಿಗಳ ಬಹುದಿನದ ಕನಸು ಇಂದು ಸಾಕಾರಗೊಂಡಿದೆ. ಗೂಡ್ಸ್ ರೈಲು ಆರಂಭದಿಂದ ವ್ಯಾಪಾರ ವಲಯದಲ್ಲಿ, ರೈತಾಪಿ, ಕಾರ್ಮಿಕ ವರ್ಗದವರಿಗೆ ಪ್ರತ್ಯಕ್ಷವಾಗಿ ಲಾಭವಾಗಲಿದೆ. ಇದರಿಂದ ದೊಡ್ಡ ಉದ್ಯಮ ಬೆಳೆಯಲಿದ್ದು, ಕೇವಲ ಅಕ್ಕಿ ರಫ್ತು ಅಷ್ಟೇ ಅಲ್ಲದೆ, ಭತ್ತ, ಮೆಕ್ಕೆಜೋಳ ಹಾಗೂ ಇನ್ನಿತರ ಕೃಷಿ ಸರಕುಗಳು ಇಲ್ಲಿಂದ ರವಾನೆ ಮಾಡಲು ಅನುಕೂಲವಾಗಲಿದೆ’ ಎಂದರು.