ಕೊಪ್ಪಳ: ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ದ್ಯಾಮವ್ವ ದೇವಿ ಸದ್ಭಕ್ತ ಮಂಡಳಿ ವತಿಯಿಂದ ಒಂಬತ್ತು ದಿನಗಳ ಕಾಲ ಪುರಾಣ ಪ್ರವಚನ ಕಾರ್ಯಕ್ರಮ ನೆರವೇರಿ, ಬುಧವಾರ ಬನ್ನಿ ಮುಡಿಯಲಾಯಿತು. ಗುರುವಾರ ಗ್ರಾಮದಲ್ಲಿ ಕುಂಬಾಭಿಷೇಕ, ಕುಂಬದ ಮೆರವಣಿಗೆ ಹಾಗೂ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಸೌರಭ ಜರುಗಲಿದೆ.
ದ್ಯಾಮವ್ವ ದೇವಿ, ಮುದ್ದಾಂಬಿಕಾ ದೇವಿ ಹಾಗೂ ಅನ್ನಪೂಣೇಶ್ವರಿ ದೇವಿ ಮೂರ್ತಿಗಳಿಗೆ ವಿಶೇಷ ಕುಂಬಾಭಿಷೇಕ ನೆರವೇರಲಿದೆ. ಮೆರವಣಿಗೆ ವೇಳೆ ಫಕೀರೇಶ್ವರ ಸ್ವಾಮೀಜಿ ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ಕೆ.ಎಫ್.ಮುದ್ದಾಬಳ್ಳಿ ಅವರ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಯಾಗಿವೆ.
ನವರಾತ್ರಿ ಅಂಗವಾಗಿ ಗ್ರಾಮದಲ್ಲಿ ಗಣೇಶ ಶಾಸ್ತ್ರಿ ಹಾಗೂ ಗುರುನಾಥಸ್ವಾಮಿ ಏಕದಂಡಿಗಿಮಠ ಅವರಿಂದ ಪುರಾಣ ಪ್ರವಚನ ನೆರವೇರಿತು.