<p><strong>ಹನುಮಸಾಗರ</strong>: ಇಲ್ಲಿನ ಸಮೃದ್ಧಿ ಪಾಟೀಲ ಅಪರೂಪದ ಪ್ರತಿಭೆಯ ಮೂಲಕ ದೇಶದಾದ್ಯಂತ ಪ್ರಖ್ಯಾತಿ ಗಳಿಸಿದ್ದಾರೆ.</p>.<p>2024ರ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಮೃದ್ಧಿ ಹೆಸರು ದಾಖಲಿಸಿಕೊಂಡಿದ್ದಾಳೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಚಿತ್ರ ಗುರುತಿಸುವ ಅಪರೂಪದ ಸಾಧನೆಯ ಕಾರಣಕ್ಕೆ ಈ ಗೌರವ ದೊರಕಿದೆ. ಹಲವು ಕ್ಷೇತ್ರಗಳಲ್ಲಿ ಸಮೃದ್ಧಿ ಪ್ರತಿಭೆ ಮೆರೆದಿರುವುದು ಗಮನಾರ್ಹವಾಗಿದೆ.</p>.<p>ಸಮೃದ್ಧಿ, ಸಿರಿಗನ್ನಡ ಸ್ವರ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಪಾಠ ಶಾಲೆಯ ಪ್ರೋತ್ಸಾಹ ತಮ್ಮ ಸಾಧನೆಗೆ ಮೂಲ ಕಾರಣವೆಂದು ಅವರು ಹೇಳುತ್ತಾರೆ. ಸಂಗೀತದಲ್ಲಿಯೂ ಅಸಾಮಾನ್ಯ ಪ್ರತಿಭೆ ಪ್ರದರ್ಶಿಸುತ್ತಿರುವ ಅವರು ಗುರುಗಳಿಗೆ ಕೃತಜ್ಞರಾಗಿದ್ದಾರೆ.</p>.<p>ತಾಯಿಯ ಮಾರ್ಗದರ್ಶನದಲ್ಲಿ ಪ್ರಗತಿ: ಸಮೃದ್ಧಿಯ ಈ ಯಶಸ್ಸಿನ ಹಿಂದಿರುವ ಪ್ರಮುಖ ವ್ಯಕ್ತಿ ಅವರ ತಾಯಿ ಸುಜಾತಾ ಪಾಟೀಲ. ಅವರು ಸಮೃದ್ಧಿಗೆ ಶ್ರದ್ಧೆ ಮತ್ತು ಸತತ ಅಭ್ಯಾಸದ ಮಹತ್ವ ತಿಳಿಸಿದ್ದಾರೆ. ಕಾರಣ ಸಮೃದ್ಧಿ ಬಾಲ್ಯದಲ್ಲಿಯೇ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ.</p>.<p>ಸಮೃದ್ಧಿಯ ಈ ಅಪರೂಪದ ಸಾಧನೆ ಗುರುತಿಸಿದ ಸಿರಿಗನ್ನಡ ಸ್ವರ ಸಂಗೀತ ಸಂಸ್ಥೆ ಅವರನ್ನು ಸನ್ಮಾನಿಸಿ ಗೌರವಿಸಿದೆ.</p>.<p>ಸಂಸ್ಥೆಯ ಅಧ್ಯಕ್ಷ ಗ್ಯಾನಪ್ಪ ತಳವಾರ ವಿದ್ಯಾರ್ಥಿನಿಯ ಸಾಧನೆ ಹರ್ಷ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ</strong>: ಇಲ್ಲಿನ ಸಮೃದ್ಧಿ ಪಾಟೀಲ ಅಪರೂಪದ ಪ್ರತಿಭೆಯ ಮೂಲಕ ದೇಶದಾದ್ಯಂತ ಪ್ರಖ್ಯಾತಿ ಗಳಿಸಿದ್ದಾರೆ.</p>.<p>2024ರ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಮೃದ್ಧಿ ಹೆಸರು ದಾಖಲಿಸಿಕೊಂಡಿದ್ದಾಳೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಚಿತ್ರ ಗುರುತಿಸುವ ಅಪರೂಪದ ಸಾಧನೆಯ ಕಾರಣಕ್ಕೆ ಈ ಗೌರವ ದೊರಕಿದೆ. ಹಲವು ಕ್ಷೇತ್ರಗಳಲ್ಲಿ ಸಮೃದ್ಧಿ ಪ್ರತಿಭೆ ಮೆರೆದಿರುವುದು ಗಮನಾರ್ಹವಾಗಿದೆ.</p>.<p>ಸಮೃದ್ಧಿ, ಸಿರಿಗನ್ನಡ ಸ್ವರ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಪಾಠ ಶಾಲೆಯ ಪ್ರೋತ್ಸಾಹ ತಮ್ಮ ಸಾಧನೆಗೆ ಮೂಲ ಕಾರಣವೆಂದು ಅವರು ಹೇಳುತ್ತಾರೆ. ಸಂಗೀತದಲ್ಲಿಯೂ ಅಸಾಮಾನ್ಯ ಪ್ರತಿಭೆ ಪ್ರದರ್ಶಿಸುತ್ತಿರುವ ಅವರು ಗುರುಗಳಿಗೆ ಕೃತಜ್ಞರಾಗಿದ್ದಾರೆ.</p>.<p>ತಾಯಿಯ ಮಾರ್ಗದರ್ಶನದಲ್ಲಿ ಪ್ರಗತಿ: ಸಮೃದ್ಧಿಯ ಈ ಯಶಸ್ಸಿನ ಹಿಂದಿರುವ ಪ್ರಮುಖ ವ್ಯಕ್ತಿ ಅವರ ತಾಯಿ ಸುಜಾತಾ ಪಾಟೀಲ. ಅವರು ಸಮೃದ್ಧಿಗೆ ಶ್ರದ್ಧೆ ಮತ್ತು ಸತತ ಅಭ್ಯಾಸದ ಮಹತ್ವ ತಿಳಿಸಿದ್ದಾರೆ. ಕಾರಣ ಸಮೃದ್ಧಿ ಬಾಲ್ಯದಲ್ಲಿಯೇ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ.</p>.<p>ಸಮೃದ್ಧಿಯ ಈ ಅಪರೂಪದ ಸಾಧನೆ ಗುರುತಿಸಿದ ಸಿರಿಗನ್ನಡ ಸ್ವರ ಸಂಗೀತ ಸಂಸ್ಥೆ ಅವರನ್ನು ಸನ್ಮಾನಿಸಿ ಗೌರವಿಸಿದೆ.</p>.<p>ಸಂಸ್ಥೆಯ ಅಧ್ಯಕ್ಷ ಗ್ಯಾನಪ್ಪ ತಳವಾರ ವಿದ್ಯಾರ್ಥಿನಿಯ ಸಾಧನೆ ಹರ್ಷ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>