‘ನಮ್ಮ ಪಕ್ಕದಲ್ಲಿಯೇ ಇರುವ ವಿಜಯ ಸಂಕೇಶ್ವರ, ಕಿರ್ಲೋಸ್ಕರ್, ಬೂಮರಡ್ಡಿ ಅವರು ಪದವೀಧರರಲ್ಲದಿದ್ದರೂ ಸಾಮಾಜಿಕ, ಶಿಕ್ಷಣ, ಸಂಸ್ಕಾರ, ಆತ್ಮವಿಶ್ವಾಸದಿಂದ ಬಹು ದೊಡ್ಡ ಉದ್ಯಮಗಳನ್ನು ಕಟ್ಟಿ ನೂರಾರು ಜನರಿಗೆ ಉದ್ಯೋಗ ನೀಡಿದರು. ಇಂತಹ ಸ್ವಾವಲಂಬಿ ಜೀವನ ರೂಪಿಸುವ ಶಿಕ್ಷಣ ವ್ಯವಸ್ಥೆ ಬರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದೆ’ ಎಂದು ಹೇಳಿದರು.