<p><strong>ಕೊಪ್ಪಳ:</strong> ಹಿಂದಿ ದಿವಸ್ ಆಚರಣೆ ವಿರೋಧಿಸಿನಗರದಲ್ಲಿಬುಧವಾರ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ ನಾರಾಯಣಗೌಡ ಬಣ) ಮತ್ತು ಜೆಡಿಎಸ್ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.</p>.<p>ಜಿಲ್ಲಾಡಳಿತ ಭವನ ಎದುರು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಮಾತನಾಡಿ ‘ಭಾರತ ಒಕ್ಕೂಟ ರಾಷ್ಟ್ರವಾಗಿದ್ದು, ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರವಾಗಿದೆ. ಒಂದೇ ಭಾಷೆಯನ್ನು ವೈಭವೀಕರಿಸುವ, ಒತ್ತಾಯವಾಗಿ ಹೇರುವ ಧೋರಣೆ ಖಂಡಿಸುತ್ತೇವೆ. ರಾಜ್ಯದಲ್ಲಿ ಕರ್ನಾಟಕವೇ ಸಾರ್ವಭೌಮ’ ಎಂದರು.</p>.<p>ಸಂಘಟನೆಯ ಪ್ರಮುಖರಾದ ಹನುಮಂತ ಬೆಸ್ತರ, ಅನಿಲಕುಮಾರ ಬಿಜ್ಜಳ, ನಿಂಗಪ್ಪ ಮೂಗಿನ, ಸಾವಿತ್ರಿ ದಳವಾಯಿ, ಆನಂದ ಬಂಡಿ, ನೀಲನಗೌಡ ಪಾಟೀಲ, ದೇಸಾಯಿ ಗೌಡರ, ಮಹ್ಮದ ರಫಿ ಸೇರಿದಂತೆ ಅನೇಕರು ಇದ್ದರು.</p>.<p>ಮನವಿ: ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.</p>.<p>ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಮಾತನಾಡಿ ‘ಹೊರಗಿನವರ ದಾಳಿಯ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತಾ ಬಂದಿದ್ದಾರೆ . ಈಗಲೂ ಸಹ ಈ ಆಚರಣೆಯಲ್ಲಿ ಕನ್ನಡಿಗರು ಪಾಲ್ಗೊಳ್ಳಬಾರದು’ ಎಂದರು.</p>.<p>ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಸೊರಟೂರು, ಕಾರ್ಯಾಧ್ಯಕ್ಷ ವಿ.ಪಿ.ಬುಲೆಟ್ಗೌಡರು, ಉಪಾಧ್ಯಕ್ಷ ಪರಶುರಾಮ ಚಿಗರಿ, ಚನ್ನಬಸಪ್ಪ ಮುತ್ತಾಳ, ಮುಖಂಡರಾದ ಸುರೇಶಗೌಡರು ಪಾಟೀಲ, ಮೈಲಾಪ್ಪ ಹೊಸಮನಿ ಹಲವಾಗಲಿ, ಕನಕರಾಯ ಹೊಸಕೇರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ಹಿಂದಿ ದಿವಸ್ ಆಚರಣೆ ವಿರೋಧಿಸಿನಗರದಲ್ಲಿಬುಧವಾರ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ ನಾರಾಯಣಗೌಡ ಬಣ) ಮತ್ತು ಜೆಡಿಎಸ್ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.</p>.<p>ಜಿಲ್ಲಾಡಳಿತ ಭವನ ಎದುರು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಮಾತನಾಡಿ ‘ಭಾರತ ಒಕ್ಕೂಟ ರಾಷ್ಟ್ರವಾಗಿದ್ದು, ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರವಾಗಿದೆ. ಒಂದೇ ಭಾಷೆಯನ್ನು ವೈಭವೀಕರಿಸುವ, ಒತ್ತಾಯವಾಗಿ ಹೇರುವ ಧೋರಣೆ ಖಂಡಿಸುತ್ತೇವೆ. ರಾಜ್ಯದಲ್ಲಿ ಕರ್ನಾಟಕವೇ ಸಾರ್ವಭೌಮ’ ಎಂದರು.</p>.<p>ಸಂಘಟನೆಯ ಪ್ರಮುಖರಾದ ಹನುಮಂತ ಬೆಸ್ತರ, ಅನಿಲಕುಮಾರ ಬಿಜ್ಜಳ, ನಿಂಗಪ್ಪ ಮೂಗಿನ, ಸಾವಿತ್ರಿ ದಳವಾಯಿ, ಆನಂದ ಬಂಡಿ, ನೀಲನಗೌಡ ಪಾಟೀಲ, ದೇಸಾಯಿ ಗೌಡರ, ಮಹ್ಮದ ರಫಿ ಸೇರಿದಂತೆ ಅನೇಕರು ಇದ್ದರು.</p>.<p>ಮನವಿ: ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.</p>.<p>ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಮಾತನಾಡಿ ‘ಹೊರಗಿನವರ ದಾಳಿಯ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತಾ ಬಂದಿದ್ದಾರೆ . ಈಗಲೂ ಸಹ ಈ ಆಚರಣೆಯಲ್ಲಿ ಕನ್ನಡಿಗರು ಪಾಲ್ಗೊಳ್ಳಬಾರದು’ ಎಂದರು.</p>.<p>ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಸೊರಟೂರು, ಕಾರ್ಯಾಧ್ಯಕ್ಷ ವಿ.ಪಿ.ಬುಲೆಟ್ಗೌಡರು, ಉಪಾಧ್ಯಕ್ಷ ಪರಶುರಾಮ ಚಿಗರಿ, ಚನ್ನಬಸಪ್ಪ ಮುತ್ತಾಳ, ಮುಖಂಡರಾದ ಸುರೇಶಗೌಡರು ಪಾಟೀಲ, ಮೈಲಾಪ್ಪ ಹೊಸಮನಿ ಹಲವಾಗಲಿ, ಕನಕರಾಯ ಹೊಸಕೇರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>