ಗಂಗಾವತಿ: ನಗರದ ಕೊಪ್ಪಳ ರಸ್ತೆಯಲ್ಲಿರುವ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಅಂಚೆ ಇಲಾಖೆ ಯಿಂದ ಅಂಚೆ ಜನ ಸಂಪರ್ಕ ಅಭಿಯಾನ ನಡೆಯಿತು.
ಅಂಚೆ ಅಧೀಕ್ಷಕ ನಿಂಗನಗೌಡ ಜಿ. ಭಂಗಿಗೌಡ್ರು ಮಾತನಾಡಿ,‘ಅಂಚೆ ಇಲಾಖೆ ಪತ್ರ ವ್ಯವಹಾರಗಳಿಂದ ಆರಂಭವಾಗಿ ಇಲ್ಲಿವರೆಗೆ ಸಾಕಷ್ಟು ಬದಲಾವಣೆಗಳು ಕಂಡು ಪತ್ರವ್ಯವಹಾರ, ಠೇವಣಿ ಜಮಾ, ಬ್ಯಾಂಕ್ ಖಾತೆಗಳ ಆರಂಭ, ಜೀವ ವಿಮಾ ಪಿಂಚಣಿ ಯೋಜನೆಗಳನ್ನ ಗ್ರಾಹಕರಿಗೆ ತಲುಪಿಸುವ ಹೊಣೆಗಾರಿಕೆ ಹೊತ್ತು ಸಾಗುತ್ತಿದೆ ಎಂದರು.
‘ಇಲ್ಲಿ ಹಣ ಠೇವಣಿ ಮಾಡುವ ಗ್ರಾಹಕರಿಗೆ ಸೂಕ್ತ ಬಡ್ಡಿ, ಸಾಲ ಸೌಲಭ್ಯಗಳಿಗೆ ಕಡಿಮೆ ಬಡ್ಡಿ ಒದಗಿಸುತ್ತದೆ. ಜನರು ಖಾಸಗಿ ಪೈನಾನ್ಸ್ ಸಂಸ್ಥೆಗಳಿಗೆ ಮಾರುಹೋಗದೆ ಸರ್ಕಾರ ಅಂಚೆ ಇಲಾಖೆಯಲ್ಲಿ ವ್ಯವಹಾರ ನಡೆಸಬೇಕು ಎಂದರು.
ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಶಿ. ಕುಲಕರ್ಣಿ, ಸೋಮಶೇಖರ ಎಸ್. ಮುದಗಲಿ, ಉಷಾ ಕುಲಕರ್ಣಿ, ವಿರುಪಾಕ್ಷಪ್ಪ ಸಿರವಾರ ಇದ್ದರು.