<p><strong>ಗಂಗಾವತಿ:</strong> ‘ಫೋಟೊಗ್ರಫಿ’ ಎನ್ನುವುದು ಒಂದು ತಪಸ್ಸು. ಅದು ಎಲ್ಲರಿಗೂ ದಕ್ಕುವುದಿಲ್ಲ. ಆದರೆ, ಅದಮ್ಯವಾದ ಉತ್ಸಾಹದ ಮೂಲಕ ಭತ್ತದ ನಾಡಿನ ಶ್ರೀನಿವಾಸ ಎಣ್ಣಿ ಆ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ.</p>.<p>ಕೆಪಿಟಿಸಿಎಲ್ನಲ್ಲಿ ಕಿರಿಯ ಎಂಜಿನಿಯರ್ ಆಗಿರುವ ಶ್ರೀನಿವಾಸ್ ಅವರ ಈ ಕಲಾ ಪ್ರಯಾಣ ಶುರುವಾಗಿದ್ದು 2015 ರಲ್ಲಿ. ಆರಂಭದಲ್ಲಿ ಸಮಸ್ಯೆ ಎದುರಿಸಿ, ಬಳಿಕ ಮೈಕೊಡವಿ ನಿಂತ ಶ್ರೀನಿವಾಸ ಅಂತರರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸುವ ಮಟ್ಟಕ್ಕೆ ಬೆಳೆದರು.</p>.<p>ಶ್ರೀನಿವಾಸ ಅವರಿಗೆ ಪ್ರಸಿದ್ಧ ಛಾಯಾಚಿತ್ರಕಾರರಾದ ರಘುಬೀರ್ ಸಿಂಗ್ ಹಾಗೂ ರಘು ರೈ ಅವರು ಪ್ರೇರಣೆ. ಯೂಟ್ಯೂಬ್ನಲ್ಲಿ ಫೋಟೊಗ್ರಫಿ ಪಟ್ಟುಗಳ ಕುರಿತು ತಿಳಿದುಕೊಂಡ ಅವರು ತಾವು ತೆಗೆದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಅದರಲ್ಲಿಯೇ ಛಾಯಾಚಿತ್ರಕಾರರನ್ನು ಪರಿಚಯ ಮಾಡಿಕೊಂಡು ತಮ್ಮ ಕೌಶಲವನ್ನು ಸುಧಾರಿಸಿಕೊಳ್ಳುತ್ತಾರೆ.</p>.<p><strong>100 ಕ್ಕೂ ಹೆಚ್ಚು ಪದಕ ಬೇಟೆ:</strong> ಹವ್ಯಾಸವಾಗಿ ಫೋಟೊಗ್ರಫಿ ಆರಂಭಿಸಿದ ಅವರು ಬಿಡುವಾದಾಗ ಹಾಗೂ ರಜೆ ದಿನಗಳಲ್ಲಿ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಊರೂರು ಸುತ್ತುತ್ತ ಉತ್ತಮ ಚಿತ್ರಗಳನ್ನು ಸೆರೆಹಿಡಿಯುತ್ತ ಬಂದಿದ್ದಾರೆ.</p>.<p>ಸೆರೆಹಿಡಿದ ಚಿತ್ರಗಳನ್ನು ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವ ಮೂಲಕ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದುವರೆಗೂ ಸುಮಾರು 25 ದೇಶಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 100 ಕ್ಕೂ ಹೆಚ್ಚು ಪದಕಗಳು ಇವರನ್ನು ಅರಸಿ ಬಂದಿವೆ.</p>.<p>ಐತಿಹಾಸಿಕ ಸ್ಮಾರಕಗಳು, ಕ್ರೀಡೆ, ಹಬ್ಬ, ಇತರ ಆಚರಣೆಗೆ ಸಂಬಂಧಿಸಿದ ಹಾಗೂ ವಾರಣಾಸಿ, ಕೇರಳ, ಕೊಲ್ಲಾಪುರ, ಕಾಶಿಯಲ್ಲಿ ಇವರು ತೆಗೆದ ಚಿತ್ರಗಳು ನೋಡುಗರನ್ನು ನಿಬ್ಬೆರಗಾಗಿಸುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ‘ಫೋಟೊಗ್ರಫಿ’ ಎನ್ನುವುದು ಒಂದು ತಪಸ್ಸು. ಅದು ಎಲ್ಲರಿಗೂ ದಕ್ಕುವುದಿಲ್ಲ. ಆದರೆ, ಅದಮ್ಯವಾದ ಉತ್ಸಾಹದ ಮೂಲಕ ಭತ್ತದ ನಾಡಿನ ಶ್ರೀನಿವಾಸ ಎಣ್ಣಿ ಆ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ.</p>.<p>ಕೆಪಿಟಿಸಿಎಲ್ನಲ್ಲಿ ಕಿರಿಯ ಎಂಜಿನಿಯರ್ ಆಗಿರುವ ಶ್ರೀನಿವಾಸ್ ಅವರ ಈ ಕಲಾ ಪ್ರಯಾಣ ಶುರುವಾಗಿದ್ದು 2015 ರಲ್ಲಿ. ಆರಂಭದಲ್ಲಿ ಸಮಸ್ಯೆ ಎದುರಿಸಿ, ಬಳಿಕ ಮೈಕೊಡವಿ ನಿಂತ ಶ್ರೀನಿವಾಸ ಅಂತರರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸುವ ಮಟ್ಟಕ್ಕೆ ಬೆಳೆದರು.</p>.<p>ಶ್ರೀನಿವಾಸ ಅವರಿಗೆ ಪ್ರಸಿದ್ಧ ಛಾಯಾಚಿತ್ರಕಾರರಾದ ರಘುಬೀರ್ ಸಿಂಗ್ ಹಾಗೂ ರಘು ರೈ ಅವರು ಪ್ರೇರಣೆ. ಯೂಟ್ಯೂಬ್ನಲ್ಲಿ ಫೋಟೊಗ್ರಫಿ ಪಟ್ಟುಗಳ ಕುರಿತು ತಿಳಿದುಕೊಂಡ ಅವರು ತಾವು ತೆಗೆದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಅದರಲ್ಲಿಯೇ ಛಾಯಾಚಿತ್ರಕಾರರನ್ನು ಪರಿಚಯ ಮಾಡಿಕೊಂಡು ತಮ್ಮ ಕೌಶಲವನ್ನು ಸುಧಾರಿಸಿಕೊಳ್ಳುತ್ತಾರೆ.</p>.<p><strong>100 ಕ್ಕೂ ಹೆಚ್ಚು ಪದಕ ಬೇಟೆ:</strong> ಹವ್ಯಾಸವಾಗಿ ಫೋಟೊಗ್ರಫಿ ಆರಂಭಿಸಿದ ಅವರು ಬಿಡುವಾದಾಗ ಹಾಗೂ ರಜೆ ದಿನಗಳಲ್ಲಿ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಊರೂರು ಸುತ್ತುತ್ತ ಉತ್ತಮ ಚಿತ್ರಗಳನ್ನು ಸೆರೆಹಿಡಿಯುತ್ತ ಬಂದಿದ್ದಾರೆ.</p>.<p>ಸೆರೆಹಿಡಿದ ಚಿತ್ರಗಳನ್ನು ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವ ಮೂಲಕ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದುವರೆಗೂ ಸುಮಾರು 25 ದೇಶಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 100 ಕ್ಕೂ ಹೆಚ್ಚು ಪದಕಗಳು ಇವರನ್ನು ಅರಸಿ ಬಂದಿವೆ.</p>.<p>ಐತಿಹಾಸಿಕ ಸ್ಮಾರಕಗಳು, ಕ್ರೀಡೆ, ಹಬ್ಬ, ಇತರ ಆಚರಣೆಗೆ ಸಂಬಂಧಿಸಿದ ಹಾಗೂ ವಾರಣಾಸಿ, ಕೇರಳ, ಕೊಲ್ಲಾಪುರ, ಕಾಶಿಯಲ್ಲಿ ಇವರು ತೆಗೆದ ಚಿತ್ರಗಳು ನೋಡುಗರನ್ನು ನಿಬ್ಬೆರಗಾಗಿಸುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>