ಸಂಸ್ಥೆಯ ಅಧ್ಯಕ್ಷದಾನಪ್ಪ ಕವಲೂರು ಮಾತನಾಡಿ, 'ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರಾರಂಭಿಸಿರುವ ಜ್ಞಾನ ಬಂಧುಪಿಯು ಕಾಲೇಜು ಕುರಿತು ತಮ್ಮ ಆಶೋತ್ತರ ವಿವರಿಸಿ, ಪ್ರಸ್ತುತ ದಿನಮಾನಗಳಿಗೆ ತಕ್ಕಂತೆ ಮಕ್ಕಳಿಗೆ ಬೇಕಾದ ಪೂರಕ ಶಿಕ್ಷಣ ಹಾಗೂ ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತ ಕಾಲೇಜಿನ ಕಟ್ಟಡ ಹಾಗೂ ಅನುಭವಿ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ ಕಾಲೇಜಿಗೆ ದಾಖಲಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಹಾಗೂ ಪಾಲಕರ-ಪೋಷಕರ ನಿರೀಕ್ಷೆಗಳನ್ನು ತಪ್ಪದೇಈಡೇರಿಸುವ ಕುರಿತು ಭರವಸೆ ನೀಡಿದರು.