ಕೆಲ ವ್ಯಾಪಾರಿಗಳು ಲಾಕ್ಡೌನ್ ಸಂದರ್ಭ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಕಚೇರಿಗೆ ದೂರುಗಳು ಬಂದಿವೆ. ಅಂಗಡಿ ಮುಚ್ಚಿದ್ದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬಂದ ಗ್ರಾಹಕರ ಅವಶ್ಯಕತೆಯನ್ನು ದುರುಪಯೋಗಪಡಿಸಿ
ಕೊಳ್ಳುತ್ತಿರುವ ವ್ಯಾಪಾರಿಗಳ ಪರವಾನಿಗೆ ರದ್ಧುಪಡಿಸಬೇಕಾಗುತ್ತದೆ. ದೇಶದ ಜನತೆ ಕೋವಿಡ್ದಿಂದ ನರಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅಧಿಕ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವುದು ಸರಿಯಲ್ಲ. ವ್ಯವಹಾರದ ನೈತಿಕತೆಯಲ್ಲ. ವ್ಯಾಪಾರಸ್ಥರಲ್ಲಿಯೂ ನೀತಿ ನಿಯತ್ತು ಇರುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.