ಅಳವಂಡಿ: ಅಳವಂಡಿಯ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ವಿವಿಧೆಡೆ ಬೆಳೆಗೆ ಹಾನಿಯಾಗಿದೆ. ಬಿರುಗಾಳಿಯಿಂದ ಕೆಲ ಗುಡಿಸಲುಗಳ ಮೇಲ್ಛಾವಣಿ ಹಾರಿಹೋದವು.
ಹಟ್ಟಿ, ಬೆಳಗಟ್ಟಿ, ಹಲವಾಗಲಿ, ಬೈರಾಪುರ ಹಾಗೂ ಮಂತಾದ ಗ್ರಾಮಗಳಲ್ಲಿ ಬಾಳೆ, ಹತ್ತಿ, ಕಬ್ಬು, ಬಾಳೆ ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಯಾಗಿದೆ.
ಬೆಳಿಗ್ಗೆಯಿಂದ ಮೋದ ಮುಸುಕಿದ ವಾತಾವರಣ ಇತ್ತು. ಮಧ್ಯಾಹ್ನ ಆಗುತ್ತಿದ್ದಂತೆಯೇ ಸಣ್ಣ ಪ್ರಮಾಣದಲ್ಲಿ ಮಳೆ ಆರಂಭವಾಗತೊಡಗಿತು. ನಂತರ ಸಂಜೆಯಾಗುತ್ತಿದ್ದಂತೆ ಜೋರಾಗಿ ಬಿರುಗಾಳಿ ಬೀಸತೊಡಗಿತು.
‘ಘಟನಾ ಸ್ಥಳಗಳಿಗೆ ಅಧಿಕಾರಿಗಳು ಕೂಡಲೇ ಬೇಟಿ ನೀಡಬೇಕು. ಪರಿಶೀಲನೆ ನಡೆಸಿ, ರೈತರಿಗೆ ಪರಿಹಾರ ನೀಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.