ತಾಲ್ಲೂಕಿನ ಜೀರಾಳ ಕಲ್ಗುಡಿ, ಚಿಕ್ಕಡಂಕನಲ್, ಹಿರೇ ಡಂಕನಕಲ್ ಗ್ರಾಮದಲ್ಲಿ ಬೆಳೆದ ಅಂದಾಜು 3000 ಎಕರೆ ಭತ್ತ ನಷ್ಟವಾಗಿದೆ. ಬೆಳೆಹಾನಿ ಸ್ಥಳಕ್ಕೆ ಸಂಸದ ಕರಡಿ ಸಂಗಣ್ಣ, ಶಾಸಕ ಬಸವರಾಜ ದಢೇಸುಗೂರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬನಾ, ಉಪ ತಹಶೀಲ್ದಾರ್ ಪ್ರಕಾಶ ಸವಡಿ, ಕಂದಾಯ ನಿರೀಕ್ಷಕ ಗುರುರಾಜ ನೂಲ್ವಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.