ಕುಕನೂರು: ‘ಪಂಡಿತ ಪುಟ್ಟರಾಜ ಗವಾಯಿಗಳು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಡಾ.ಮಹದೇವ ದೇವರು ಅಭಿಪ್ರಾಯಪಟ್ಟರು.
ಅನ್ನದಾನೇಶ್ವರ ಸಂಸ್ಕೃತಿ ಕಲಾ ತಂಡ, ಪಟ್ಟಣದ ಅನ್ನದಾನೇಶ್ವರ ಶಾಖಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಗಾನಯೋಗಿ ಡಾ.ಪುಟ್ಟರಾಜ ಗವಾಯಿಗಳ 10ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಧ ಗುರು, ಅಂಧ ಶಿಷ್ಯರು ಸಂಗೀತದ ಮೂಲಕ ಜಗತ್ತನ್ನೇ ಬೆಳಗುತ್ತಾರೆ ಎಂದು ಗೊತ್ತಿರಲಿಲ್ಲ. ಪುಟ್ಟಯ್ಯನವರು 8 ವರ್ಷದ ಬಾಲಕನಿರುವಾಗ ಅವರನ್ನು ಪಂಡಿತ ಪಂಚಾಕ್ಷರಿ ಮಡಿಲಿಗೆ ಒಪ್ಪಿಸಿದರಂತೆ, ಅಂಧ ಗುರುಗಳು ಅಂಧ ಶಿಷ್ಯನನ್ನು ಪಡೆದು ಸಂಗೀತದ ಮೂಲಕ ಜನರನ್ನು ಗೆಲ್ಲುತ್ತಾರೆ. ಇದು ಸರ್ವರಿಗೂ ಮಾದರಿ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಶಂಭು ಜೋಳದ, ಶರಣಯ್ಯ ಇಟಗಿ, ಬಸವರಾಜ ಅಡವಿ, ಗದಿಗೇಪ್ಪ ಪವಾಡ ಶೇಟ್ಟಿ, ಬಸವರಾಜ ಬಡಿಗೇರ, ಬಾಬಣ್ಣ ಕಜಲ್ಮನಿ, ವೀರಯ್ಯ ತೋಂಟದಾರ್ಯಮಠ ಹಾಗೂ ಶೇಖಪ್ಪ ಶಿರೂರ ಇದ್ದರು.