ಸ್ಥಳೀಯ ನಿವಾಸಿ ಓಕಾಂರ ಮಾತನಾಡಿ, ಅಮರ್ ಭಗತಸಿಂಗ್ ನಗರ ಕೊಳೆಗೇರಿಯಾಗಿದ್ದು, ಇಲ್ಲಿನ ಜನ ಹಕ್ಕುಪತ್ರ, ಪಟ್ಟ ಇಲ್ಲದ ಸ್ಥಳಗಳಲ್ಲಿ ಮನೆ ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ಹಲವು ವರ್ಷಗಳಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ತಲೆ ಕೆಡಿಸಿಕೊಂಡಿಲ್ಲ ಎಂದು ಅಳಲು ತೋಡಿಕೊಂಡರು.