ಈ ವಿಷಯದಲ್ಲಿ ಸರ್ಕಾರವೂ ಪಾರದರ್ಶಕ ನೀತಿಯನ್ನು ಅನುಸರಿಸಬೇಕಾಗುತ್ತದೆ. ಆದರೆ ಕೆಲ ಶಕ್ತಿಗಳು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಲಂಬಾಣಿ, ಭೋವಿ, ಕೊರಚ, ಕೊರಮ ಇತರೆ ಜಾತಿಗಳನ್ನು ಹೊರಹಾಕುವ ದುರುದ್ದೇಶದಿಂದ ಅನಗತ್ಯ ಚರ್ಚೆಯನ್ನು ಹುಟ್ಟುಹಾಕಿವೆ. ವರ್ಗೀಕರಣ, ಕೆನೆಪದರು ಎಂಬ ವಿಷಯಗಳನ್ನು ಹರಿಬಿಟ್ಟು ಈ ಸಮುದಾಯಗಳಲ್ಲಿನ ಒಗ್ಗಟ್ಟನ್ನು ಛಿದ್ರಗೊಳಿಸುವ ಹುನ್ನಾರ ನಡೆಸಿವೆ ಎಂದು ಆರೋಪಿಸಿದರು.