<p><strong>ಕಾರಟಗಿ</strong>: ಶಿವಮಾಲೆ ಧರಿಸಿದವರು ಅಪಚಾರ ಮಾಡದಿರಿ. ನಿಮ್ಮ ನಡೆ, ನುಡಿಯ ಬಗ್ಗೆ ಜನರ ಗಮನವಿರುತ್ತದೆ. ನಿಮ್ಮನ್ನು ಶಿವನ ಸ್ವರೂಪಿಗಳು ಎಂಬ ಭಾವ ಜನರಲ್ಲಿರುತ್ತದೆ. ಅದಕ್ಕೆ ತಕ್ಕಂತೆ ನಿಮ್ಮ ನಡತೆ, ಶುದ್ದ ಮನಸ್ಸು ಸದಾ ಇರಲಿ’ ಎಂದು ತಲೇಖಾನ ಮಠದ ವೀರಭದ್ರ ಶರಣ ಹೇಳಿದರು.</p>.<p>ಪಟ್ಟಣದ ಸರ್ವೋದಯ ವೇದಿಕೆಯು ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ 31ನೇ ವರ್ಷದ ಅರ್ಧ ಮಂಡಲದ ಶ್ರೀಶೈಲ ಶಿವದೀಕ್ಷೆಯ ಶಿವಮಾಲಾಧಾರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>‘ವ್ಯಸನ, ಚಟಗಳನ್ನು ಮಾಲೆ ವಿರಮಣದ ಬಳಿಕವೂ ಶಾಸ್ವತವಾಗಿ ತ್ಯಜಿಸಿರಿ. ಜಪ, ಆಚರಣೆಯು ಶ್ರದ್ದೆ, ಭಕ್ತಿಯಿಂದ ಇರಲಿ. ಯಾವುದೇ ನಿರೀಕ್ಷೆ ಇರದೇ ಶ್ರದ್ದೆಯಿಂದ ಆಚರಿಸಿರಿ’ ಎಂದರು.</p>.<p>ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಮಾತನಾಡಿ, ‘ಶ್ರದ್ದೆಯಿಂದ ಮಾಲಾಧಾರಣೆಯ ಆಚರಣೆಯನ್ನು ಮಾಡಿರಿ. ನಿಮ್ಮ ಆಚರಣೆಯ ಜೊತೆಗೆ ನಿಮ್ಮ ಕಾಯಕದ ಬಗ್ಗೆ ಶ್ರದ್ದೆ ಇರಲಿ’ ಎಂದರು.</p>.<p>ಶರಣಬಸವೇಶ್ವರ ಪುರಾಣ ಸಮಿತಿಯ ಮುಖ್ಯಸ್ಥ ಕುಳಗಿ ಗುಂಡಪ್ಪ ಮಾತನಾಡಿದರು. ಉದ್ಯಮಿ ಕೆ.ನಾಗರಾಜ್, ವೇದಿಕೆ ಅಧ್ಯಕ್ಷ ನಾಗರಾಜ್ ಸಜ್ಜನ್, ಖಜಾಂಚಿ ಸೋಮನಾಥಸ್ವಾಮಿ ಗಣಾಚಾರಿ, ಕಾರ್ಯಾಧ್ಯಕ್ಷ ಬಸವರಾಜ ಕನಕಗಿರಿ, ಕಟಾಂಬ್ಲಿ ಮಲ್ಲಿಕಾರ್ಜುನ, ಅರ್ಚಕ ಮುತ್ತಯ್ಯಸ್ವಾಮಿ, ಶಿವಪುತ್ರಯ್ಯಸ್ವಾಮಿ ಉಪಸ್ಥಿತರಿದ್ದರು.</p>.<p>ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಅರ್ಚಕ ಮುತ್ತಯ್ಯಸ್ವಾಮಿ ನೇತೃತ್ವದಲ್ಲಿ ನಸುಕಿನ ಜಾವದಿಂದ ವಿಶೇಷ ಪೂಜೆ, ಅಲಂಕಾರ, ಅರ್ಚನೆ, ಅಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಶಿವಮಾಲಾಧಾರಣಾ ಕಾರ್ಯಕ್ರಮ ನಡೆಯಿತು.</p>.<p>ಶಿವಮಾಲಾಧಾರಿಗಳಿಗೆ ಭೋಜನದ ವ್ಯವಸ್ಥೆಯನ್ನು ಎಲ್ವಿಟಿ ಸಮೂಹ ಸಂಸ್ಥೆಯ ಕೆ.ಸೂಗಪ್ಪ ಮತ್ತು ಕೆ.ನಾಗಪ್ಪ ಮಕ್ಕಳು ಮಾಡಿದ್ದರು.</p>.<p>ಒಟ್ಟು 60 ಭಕ್ತರು ಶಿವಮಾಲಾಧಾರಣೆ ಮಾಡಿಕೊಂಡರು. ಡಾ. ಶರಣಪ್ಪ ಮಾವಿನಮಡುಗು ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ</strong>: ಶಿವಮಾಲೆ ಧರಿಸಿದವರು ಅಪಚಾರ ಮಾಡದಿರಿ. ನಿಮ್ಮ ನಡೆ, ನುಡಿಯ ಬಗ್ಗೆ ಜನರ ಗಮನವಿರುತ್ತದೆ. ನಿಮ್ಮನ್ನು ಶಿವನ ಸ್ವರೂಪಿಗಳು ಎಂಬ ಭಾವ ಜನರಲ್ಲಿರುತ್ತದೆ. ಅದಕ್ಕೆ ತಕ್ಕಂತೆ ನಿಮ್ಮ ನಡತೆ, ಶುದ್ದ ಮನಸ್ಸು ಸದಾ ಇರಲಿ’ ಎಂದು ತಲೇಖಾನ ಮಠದ ವೀರಭದ್ರ ಶರಣ ಹೇಳಿದರು.</p>.<p>ಪಟ್ಟಣದ ಸರ್ವೋದಯ ವೇದಿಕೆಯು ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ 31ನೇ ವರ್ಷದ ಅರ್ಧ ಮಂಡಲದ ಶ್ರೀಶೈಲ ಶಿವದೀಕ್ಷೆಯ ಶಿವಮಾಲಾಧಾರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>‘ವ್ಯಸನ, ಚಟಗಳನ್ನು ಮಾಲೆ ವಿರಮಣದ ಬಳಿಕವೂ ಶಾಸ್ವತವಾಗಿ ತ್ಯಜಿಸಿರಿ. ಜಪ, ಆಚರಣೆಯು ಶ್ರದ್ದೆ, ಭಕ್ತಿಯಿಂದ ಇರಲಿ. ಯಾವುದೇ ನಿರೀಕ್ಷೆ ಇರದೇ ಶ್ರದ್ದೆಯಿಂದ ಆಚರಿಸಿರಿ’ ಎಂದರು.</p>.<p>ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಮಾತನಾಡಿ, ‘ಶ್ರದ್ದೆಯಿಂದ ಮಾಲಾಧಾರಣೆಯ ಆಚರಣೆಯನ್ನು ಮಾಡಿರಿ. ನಿಮ್ಮ ಆಚರಣೆಯ ಜೊತೆಗೆ ನಿಮ್ಮ ಕಾಯಕದ ಬಗ್ಗೆ ಶ್ರದ್ದೆ ಇರಲಿ’ ಎಂದರು.</p>.<p>ಶರಣಬಸವೇಶ್ವರ ಪುರಾಣ ಸಮಿತಿಯ ಮುಖ್ಯಸ್ಥ ಕುಳಗಿ ಗುಂಡಪ್ಪ ಮಾತನಾಡಿದರು. ಉದ್ಯಮಿ ಕೆ.ನಾಗರಾಜ್, ವೇದಿಕೆ ಅಧ್ಯಕ್ಷ ನಾಗರಾಜ್ ಸಜ್ಜನ್, ಖಜಾಂಚಿ ಸೋಮನಾಥಸ್ವಾಮಿ ಗಣಾಚಾರಿ, ಕಾರ್ಯಾಧ್ಯಕ್ಷ ಬಸವರಾಜ ಕನಕಗಿರಿ, ಕಟಾಂಬ್ಲಿ ಮಲ್ಲಿಕಾರ್ಜುನ, ಅರ್ಚಕ ಮುತ್ತಯ್ಯಸ್ವಾಮಿ, ಶಿವಪುತ್ರಯ್ಯಸ್ವಾಮಿ ಉಪಸ್ಥಿತರಿದ್ದರು.</p>.<p>ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಅರ್ಚಕ ಮುತ್ತಯ್ಯಸ್ವಾಮಿ ನೇತೃತ್ವದಲ್ಲಿ ನಸುಕಿನ ಜಾವದಿಂದ ವಿಶೇಷ ಪೂಜೆ, ಅಲಂಕಾರ, ಅರ್ಚನೆ, ಅಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಶಿವಮಾಲಾಧಾರಣಾ ಕಾರ್ಯಕ್ರಮ ನಡೆಯಿತು.</p>.<p>ಶಿವಮಾಲಾಧಾರಿಗಳಿಗೆ ಭೋಜನದ ವ್ಯವಸ್ಥೆಯನ್ನು ಎಲ್ವಿಟಿ ಸಮೂಹ ಸಂಸ್ಥೆಯ ಕೆ.ಸೂಗಪ್ಪ ಮತ್ತು ಕೆ.ನಾಗಪ್ಪ ಮಕ್ಕಳು ಮಾಡಿದ್ದರು.</p>.<p>ಒಟ್ಟು 60 ಭಕ್ತರು ಶಿವಮಾಲಾಧಾರಣೆ ಮಾಡಿಕೊಂಡರು. ಡಾ. ಶರಣಪ್ಪ ಮಾವಿನಮಡುಗು ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>