<p><strong>ತಾವರಗೇರಾ</strong>: ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಎಪಿಎಂಸಿ ಆವರಣದಲ್ಲಿ ಸೋಮವಾರ 1.5 ಟನ್ ತೂಕದ ಕಲ್ಲು ಎಳೆಯುವ ಸ್ಫರ್ಧೆ ನಡೆಯಿತು.</p>.<p>ಸ್ಥಳೀಯ ಎಪಿಎಂಸಿ ಮತ್ತು ವೀರಭದ್ರೇಶ್ವರ ಜಾತ್ರಾ ಸಮಿತಿ ಆಶ್ರಯದಲ್ಲಿ ನಡೆದ ಸ್ಪರ್ಧೆಯನ್ನು ಗುಡದೂರು ಮಠದ ಗುರಯ್ಯ ತಾತನವರು, ತಾವರಗೇರಾ ಸಿದ್ಧರೂಡ ಕುಮಾರ ಸಿದ್ಧರೂಡ ಚಾಲನೆ ನೀಡಿದರು.</p>.<p>ಸ್ಪರ್ಧೆಯಲ್ಲಿ ನವಲಕಲ್ ಗ್ರಾಮದ ಹನಮಂತಪ್ಪ ಅವರ ಕಿಚ್ಚ ಬಾಯ್ಸ್ ಹೆಸರಿನ ಎತ್ತಿನ ಜೋಡಿ ಪ್ರಥಮ ಸ್ಥಾನ. ಕುರುಕುಂದ ಅಮರೇಶಪ್ಪ ಎತ್ತಿನ ಜೋಡಿ ದ್ವಿತೀಯ, ಮಂಜಲಾಪೂರ ಮಾರುತಿ ಎತ್ತಿನ ಜೋಡಿ ತೃತಿಯ ಬಹುಮಾನ ಪಡೆದವು.</p>.<p>ವಿಜೇತ ಎತ್ತಿನ ಜೋಡಿಗಳಿಗೆ ಪ್ರಥಮ ಬಹುಮಾನ ಸ್ಕೂಟಿ ಮತ್ತು ದ್ವೀತಿಯ ಬಹುಮಾನ ₹15 ಸಾವಿರ ಮತ್ತು ತೃತೀಯ ಬಹುಮಾನ ₹11 ಸಾವಿರ ಬಹುಮಾನ ವಿತರಣೆ ಮಾಡಲಾಯಿತು.</p>.<p>ವೇದಿಕೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ವೀರಭದ್ರಪ್ಪ ನಾಲತ್ವಾಡ, ಶ್ಯಾಮೀದಸಾಬ ನಾಲಬಂದ, ಆದಪ್ಪ ನಾಲತ್ವಾಡ, ಅಮರೇಶ ನಾಲತ್ವಾಡ, ಕರಡೆಪ್ಪ ನಾಲತ್ವಾಡ, ದೊಡ್ಡನಗೌಡ ಸರನಾಡಗೌಡರ, ವಿರುಪಣ್ಣ ನಾಲತ್ವಾಡ , ಮಾನಪ್ಪ ಮದ್ದಿನ್, ಶೇಖರಪ್ಪ ಗುಬ್ಬಿ, ನಿಂಗಪ್ಪ ಬಡಿಗೇರ, ಈರಣ್ಣ ಲಾಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾವರಗೇರಾ</strong>: ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಎಪಿಎಂಸಿ ಆವರಣದಲ್ಲಿ ಸೋಮವಾರ 1.5 ಟನ್ ತೂಕದ ಕಲ್ಲು ಎಳೆಯುವ ಸ್ಫರ್ಧೆ ನಡೆಯಿತು.</p>.<p>ಸ್ಥಳೀಯ ಎಪಿಎಂಸಿ ಮತ್ತು ವೀರಭದ್ರೇಶ್ವರ ಜಾತ್ರಾ ಸಮಿತಿ ಆಶ್ರಯದಲ್ಲಿ ನಡೆದ ಸ್ಪರ್ಧೆಯನ್ನು ಗುಡದೂರು ಮಠದ ಗುರಯ್ಯ ತಾತನವರು, ತಾವರಗೇರಾ ಸಿದ್ಧರೂಡ ಕುಮಾರ ಸಿದ್ಧರೂಡ ಚಾಲನೆ ನೀಡಿದರು.</p>.<p>ಸ್ಪರ್ಧೆಯಲ್ಲಿ ನವಲಕಲ್ ಗ್ರಾಮದ ಹನಮಂತಪ್ಪ ಅವರ ಕಿಚ್ಚ ಬಾಯ್ಸ್ ಹೆಸರಿನ ಎತ್ತಿನ ಜೋಡಿ ಪ್ರಥಮ ಸ್ಥಾನ. ಕುರುಕುಂದ ಅಮರೇಶಪ್ಪ ಎತ್ತಿನ ಜೋಡಿ ದ್ವಿತೀಯ, ಮಂಜಲಾಪೂರ ಮಾರುತಿ ಎತ್ತಿನ ಜೋಡಿ ತೃತಿಯ ಬಹುಮಾನ ಪಡೆದವು.</p>.<p>ವಿಜೇತ ಎತ್ತಿನ ಜೋಡಿಗಳಿಗೆ ಪ್ರಥಮ ಬಹುಮಾನ ಸ್ಕೂಟಿ ಮತ್ತು ದ್ವೀತಿಯ ಬಹುಮಾನ ₹15 ಸಾವಿರ ಮತ್ತು ತೃತೀಯ ಬಹುಮಾನ ₹11 ಸಾವಿರ ಬಹುಮಾನ ವಿತರಣೆ ಮಾಡಲಾಯಿತು.</p>.<p>ವೇದಿಕೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ವೀರಭದ್ರಪ್ಪ ನಾಲತ್ವಾಡ, ಶ್ಯಾಮೀದಸಾಬ ನಾಲಬಂದ, ಆದಪ್ಪ ನಾಲತ್ವಾಡ, ಅಮರೇಶ ನಾಲತ್ವಾಡ, ಕರಡೆಪ್ಪ ನಾಲತ್ವಾಡ, ದೊಡ್ಡನಗೌಡ ಸರನಾಡಗೌಡರ, ವಿರುಪಣ್ಣ ನಾಲತ್ವಾಡ , ಮಾನಪ್ಪ ಮದ್ದಿನ್, ಶೇಖರಪ್ಪ ಗುಬ್ಬಿ, ನಿಂಗಪ್ಪ ಬಡಿಗೇರ, ಈರಣ್ಣ ಲಾಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>