ವಜ್ರಬಂಡಿ ತಲ್ಲೂರು ಹಾಗೂ ಮದ್ಲೂರು ಗ್ರಾಮಗಳ ಸೀಮಾದಿಂದ ಕೆರೆಗೆ ಸಾಕಷ್ಟು ಪ್ರಮಾಣದಲ್ಲಿ ಮಳೆ ನೀರು ಸಂಗ್ರಹಗೊಂಡು ವರ್ಷಪೂರ್ತಿ ತುಂಬಿರುತ್ತಿತ್ತು. ಆದರೆ ವಿವಿಧ ರೀತಿಯಲ್ಲಿ ಕೆರೆ ಅಭಿವೃದ್ಧಿಯಾದ ನಂತರ ನೀರಿನ ಸಂಗ್ರಹಣೆಯ ಪ್ರಮಾಣ ಕಡಿಮೆಯಾಗಿದೆ
-ನಾಗರಾಜ ತಲ್ಲೂರು, ಗ್ರಾಮಸ್ಥ
ಗ್ರಾಮಸ್ಥರಿಗೆ ಪರಿಹಾರ ನೀಡಿ ಪಡೆದ ಜಮೀನನ್ನು ಕಂದಾಯ ಇಲಾಖೆಯವರು ಸಣ್ಣನೀರಾವರಿ ಇಲಾಖೆಯ ಹೆಸರಲ್ಲಿ ಆಸ್ತಿ ವರ್ಗಾವಣೆ ಮಾಡಿಕೊಟ್ಟರೆ ಮುಂದಿನ ಅಗತ್ಯಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ
- ಜಗನ್ನಾಥ ಜೋತಗೊಂಡದ್, ಎಇಇ, ಸಣ್ಣ ನೀರಾವರಿ ಇಲಾಖೆ ಯಲಬುರ್ಗಾ
ಗೆದಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ತಲ್ಲೂರು ಕೆರೆ ಒತ್ತುವರಿ ಬಗ್ಗೆ ದೂರುಗಳಿವೆ. ಸಣ್ಣ ನೀರಾವರಿ ಇಲಾಖೆ ಕೆರೆ ವಿಸ್ತೀರ್ಣಕ್ಕೆ ಹದ್ದುಬಸ್ತು ಮಾಡಿಕೊಟ್ಟರೆ ಸಂರಕ್ಷಣೆಗೆ ಅನುಕೂಲವಾಗುತ್ತದೆ
- ದೊಡ್ಡಪ್ಪ ನಾಯಕ, ಪಿಡಿಒ, ಗ್ರಾಪಂ ಗೆದಗೇರಿ
ಯಲಬುರ್ಗಾ ತಾಲ್ಲೂಕು ತಲ್ಲೂರು ಕೆರೆಗೆ ಸೇರಿದ ಜಮೀನಿನಲ್ಲಿ ರೈತರೊಬ್ಬರು ಮನೆ ಕಟ್ಟಿಕೊಂಡಿರುವುದು ಮತ್ತು ಬೆಳೆ ಬೆಳೆದಿರುವುದು