ಅಲ್ಲದೇ ಬಾಲಕನಿಗೆ ಶಾಲಾ ಸಮವಸ್ತ್ರ ನೀಡಿ ನಂತರ ಆತನ ಪಕ್ಕದಲ್ಲಿಯೇ ಕುಳಿತು ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದು ಪ್ರೋತ್ಸಾಹಿಸಿದ್ದು ಸಾರ್ವಜನಿಕರ ಮೆಚ್ಚುಗೆ ಕಾರಣವಾಯಿತು. ಗುರುವಾರವೂ ಬಾಲಕ ಶಾಲೆಗೆ ಹಾಜರಾಗಿದ್ದಾನೆ ಎಂದು ಶಿಕ್ಷಣಾಧಿಕಾರಿ 'ಪ್ರಜಾವಾಣಿ'ಗೆ ವಿವರಿಸಿದರು. ಕಳೆದ ವರ್ಷವೂ ಶಿಕ್ಷಣಾಧಿಕಾರಿ ಕಾಂಬಳೆ ಇದೇ ರೀತಿ ದನಗಾಹಿಗಳಾಗಿದ್ದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿದ್ದರು.